Thursday, August 6, 2026

BDA Apartments

Home Front Page ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ…

ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ…

ಮೈಸೂರು,ಮೇ,8,2021(www.justkannada.in):  ಕೊರೋನಾ ಹಿನ್ನೆಲೆ ಬಡವರಿಗೆ ನೆರವಾಗುವಂತೆ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ ಒತ್ತಾಯಿಸಿ  ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು.jk

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನಗರದ ಶಾಂತಲಾ ಚಿತ್ರಮಂದಿರ ಬಳಿಯ ಪೋಸ್ಟ್ ಆಫಿಸ್ ಎದುರು ಪತ್ರ ಚಳುವಳಿ ನಡೆಯಿತು. ಸಿಎಂ ಬಿಎಸ್ ಯಡಿಯೂರಪ್ಪಗೆ ಸಾಮೂಹಿಕ ಪತ್ರ ಬರೆಯುವ ಮೂಲಕ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ  ಆಗ್ರಹಿಸಿದರು.Letter Movement- 10kg - rice – mysore-congress

ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಬೆಡ್, ಆಕ್ಸಿಜನ್ ಹಾಗೂ ಕೋವಿಡ್ ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ‌. ಇದರ ಜೊತೆಗೆ ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ಪ್ರಮಾಣದಲ್ಲಿ ನೀಡಲಾಗ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಸರ್ಕಾರ ಅನ್ನಭಾಗ್ಯದ ಅಕ್ಕಿಯನ್ನು 10ಕೆ.ಜಿಗೆ ಏರಿಸಬೇಕು. ಮಧ್ಯಮ ವರ್ಗದವರಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ಎಂ.ಕೆ.ಸೋಮಶೇಖರ್ ಒತ್ತಾಯಿಸಿದರು.

Key words: Letter Movement- 10kg – rice – mysore-congress