Monday, August 31, 2026

BDA Apartments

Home Front Page ಸೈಕಲ್ ಜಾಥಾ ಮೂಲಕ ಕೋವಿಡ್ 2ನೇ ಅಲೆಯ ಪರಿಣಾಮ ಕುರಿತು ಜನರಲ್ಲಿ ಅರಿವು…

ಸೈಕಲ್ ಜಾಥಾ ಮೂಲಕ ಕೋವಿಡ್ 2ನೇ ಅಲೆಯ ಪರಿಣಾಮ ಕುರಿತು ಜನರಲ್ಲಿ ಅರಿವು…

ಮೈಸೂರು, ಏಪ್ರಿಲ್ ,12,2021(www.justkannada.in): ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಮೈಸೂರು ಆವೃತ್ತಿ ವತಿಯಿಂದ, ಕೋವಿಡ್‌ ನ ಎರಡನೇ ಅಲೆಯಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಇಂದು ಮೈಸೂರಿನಲ್ಲಿ  ಸೈಕಲ್ ಜಾಥಾ ಏರ್ಪಡಿಸಲಾಗಿತ್ತು.Agriculture,Pumpset,Adequate,Electricity,giving,Ask,Protest 

ಕೆ.ಆರ್. ಪೊಲೀಸ್ ಠಾಣೆಯ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರು ಈ ಸೈಕಲ್ ಜಾಥಾವನ್ನು ಉದ್ಘಾಟಿಸಿದರು. ಕೋವಿಡ್ ಸರ್ವವ್ಯಾಪಿಯ ಎರಡನೇ ಅಲೆ ವಯಸ್ಕರು ಸೇರಿದಂತೆ ಮಕ್ಕಳಿಗೂ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆಯನ್ನು ಹಾಗೂ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು. Cycle Jatha- COVID-19 -Pandemic awareness- pandemic affect -children

ಬೆಳಿಗ್ಗೆ 6.30ಕ್ಕೆ ಆಂದೋಲನ ವೃತ್ತದ ಬಳಿ ಆರಂಭವಾದ ಈ  14 ಕಿ.ಮೀ. ಉದ್ದದ ಸೈಕಲ್ ಜಾಥಾ ಮಾನಂದವಾಡಿ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಸಾವಯವ ಫಾರಂ ಬಳಿ ಅಂತ್ಯಗೊಂಡಿತು.

Keywords: Cycle Jatha- COVID-19 -Pandemic awareness- pandemic affect -children