Saturday, August 22, 2026

BDA Apartments

Home Front Page ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಹುಚ್ಚು ಹಿಡಿದಿದೆ:  ನಿಮಾನ್ಸ್ ಗೆ ದಾಖಲಾಗಲಿ- ಶಾಸಕ ಸಂಗಮೇಶ್ ಕಿಡಿ…

ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಹುಚ್ಚು ಹಿಡಿದಿದೆ:  ನಿಮಾನ್ಸ್ ಗೆ ದಾಖಲಾಗಲಿ- ಶಾಸಕ ಸಂಗಮೇಶ್ ಕಿಡಿ…

ಶಿವಮೊಗ್ಗ,ಮಾರ್ಚ್,13,2021(www.justkannada.in) : ‘ಕೋಮುಲಭೆ ಸೃಷ್ಟಿಸೋಕೆ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ  ನೀಡುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಿದೆ. ಅವರು ನಿಮಾನ್ಸ್ ಗೆ ದಾಖಲಾಗಲಿ ಎಂದು  ಶಾಸಕ ಬಿ.ಕೆ ಸಂಗಮೇಶ್ ಕಿಡಿಕಾರಿದರು.jk

ಇಂದು ಮಾದ್ಯಮಗಳ ಜತೆ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್,  ‘ಕೋಮುಲಭೆ ಸೃಷ್ಟಿಸಲು ಸಚಿವ ಕೆ.ಎಸ್ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ಕೊಡ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಅಂದ್ರೆ ನಮಗ್ಯಾಕೆ ಖುಷಿ ಆಗುತ್ತೆ? ಈಶ್ವರಪ್ಪ ಡೋಂಗಿ ಶ್ರೀರಾಮನ ಭಕ್ತ. ನಾವು ಭಾರತೀಯರು, ನಮಗೂ ಶ್ರೀರಾಮ ದೇವರು ಎಂದು ತಿಳಿಸಿದರು.minister-ks-eshwarappa-mad-mla-sangamesh

ಇನ್ನು ನಮ್ಮ ವಿರುದ್ದ ಪುಡಿ ರಾಜಕಾರಣಿಗಳಿಂದ ಹೂಡಿರುವ ಪ್ರಕರಣಗಳನ್ನ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ವಿಧಾನಸಭೆಯಲ್ಲಿ ಧರಣಿ ಮುಂದುವರೆಸುತ್ತೇನೆ. ಇದು ನನ್ನ ಹಕ್ಕು ನಾನು ಕೇಳುತ್ತೇನೆ ಎಂದು  ಶಾಸಕ ಸಂಗಮೇಶ್ ತಿಳಿಸಿದರು.

Key words: Minister -KS Eshwarappa –mad-MLA-Sangamesh