Wednesday, August 26, 2026

BDA Apartments

Home Front Page ಕಾರಣ ಕೇಳಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ- ಡಿ.ಕೆ ಶಿವಕುಮಾರ್ ಭೇಟಿ ಬಳಿಕ ತನ್ವೀರ್ ಸೇಠ್...

ಕಾರಣ ಕೇಳಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ- ಡಿ.ಕೆ ಶಿವಕುಮಾರ್ ಭೇಟಿ ಬಳಿಕ ತನ್ವೀರ್ ಸೇಠ್ ಹೇಳಿಕೆ…

ಬೆಂಗಳೂರು,ಮಾರ್ಚ್,2,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ, ಮೈತ್ರಿ ವಿಚಾರ ಎಐಸಿಸಿ ಮಟ್ಟಕ್ಕೆ ಹೋಗಿದೆ. ಎಐಸಿಸಿ ನನಗೆ ಕಾರಣ ಕೇಳಿ ನೋಟಿಸ್ ನೀಡಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.jk

ಶಾಸಕ ತನ್ವಿರ್ ಸೇಠ್ ಇಂದು  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚಿಸಿದರು. ಈ ವೇಳೆ  ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಕುರಿತು ಲಿಖಿತ ರೂಪದಲ್ಲಿ ಸ್ಪಷ್ಟನೆಯನ್ನು ನೀಡಿದರು.issued-notice-mla-tanveer-sait-statement-after-meet-kpcc-president-dk-shivakumar

ಬಳಿಕ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ವಿಚಾರ ಎಐಸಿಸಿ ಮಟ್ಟಕ್ಕೆ ಹೋಗಿದೆ. ತಕ್ಕ ಸಂದರ್ಭದಲ್ಲಿ ನಾನು ನಾಯಕರನ್ನ ಭೇಟಿ ಮಾಡುತ್ತೇನೆ. ನನಗೆ ಕಾರಣ ಕೇಳಿ ಎಐಸಿಸಿ ನೋಟಿಸ್ ನೀಡಿದೆ. ಪಕ್ಷ ಕೇಳುವ ಪ್ರಶ್ನೆಗೆ ನಾನು ಉತ್ತರ ನೀಡುತ್ತೇನೆ ಎಂದರು.

Key words: issued –notice-MLA-Tanveer Sait- statement -after –meet- kpcc president- DK Shivakumar