Tuesday, August 25, 2026

BDA Apartments

Home Front Page “ಯೋಧನ ಮೃತದೇಹ ಇಂದು ಅಥವಾ ನಾಳೆ ತವರಿಗೆ”

“ಯೋಧನ ಮೃತದೇಹ ಇಂದು ಅಥವಾ ನಾಳೆ ತವರಿಗೆ”

ಹಾಸನ,ಫೆಬ್ರವರಿ,07,2021 (www.justkannada.in) : ಹಿಮಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.jk

ಜಿಲ್ಲೆಯ ಅರಕಲಗೂಡು ತಾಲೂಕಿನ ಬಾಣದಹಳ್ಳಿಯ ನಿವಾಸಿ ಬಿ.ಆರ್.ರಾಕೇಶ್(23). ಮೂರು ವರ್ಷದ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಎರಡು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ತಿಳಿದು ಬಂದಿದೆ.

warrior-carcass-village-today-tomorrow
ಕೃಪೆ : internet

ಎರಡು ದಿನಗಳ ಹಿಂದೆ ದಿಢೀರ್ ಅಸ್ವಸ್ಥನಾಗಿ ಛತ್ತೀಸ್ ಗಢದ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಯೋಧನ ಸಾವಿನ ಸುದ್ದಿಯಿಂದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಯೋಧನ ಮೃತದೇಹ ತವರಿಗೆ ಆಗಮಿಸುವ ನಿರೀಕ್ಷೆಯಿದೆ.

key words : warrior-carcass-village-today-tomorrow