Sunday, August 9, 2026

BDA Apartments

Home Front Page ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತಾ ಒಪ್ಪುತ್ತೀರಾ…? ಸಿದ್ಧರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ...

ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತಾ ಒಪ್ಪುತ್ತೀರಾ…? ಸಿದ್ಧರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ….

 ಬೆಂಗಳೂರು,ಡಿಸೆಂಬರ್,07,2020(www.justkannada.in) :  ಗ್ರಾಪಂ ಚುನಾವಣೆ ಪ್ರಣಾಳಿಕೆಯಲ್ಲಿ ಗೋವು ಕಡಿಯಿರಿ ಎಂದು ಕಾಂಗ್ರೆಸ್ ನವರು ಹೇಳಲಿ. ಗೋವನ್ನು ತಾಯಿ ಸ್ಥಾನದಲ್ಲಿ ನೋಡುತ್ತೇವೆ. ಕೋಟಿ, ಕೋಟಿ ಜನರ ನಂಬಿಕೆಗೆ ಧಕ್ಕೆ ತರಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.logo-justkannada-mysore

ಎಲ್ಲಿ ಬೇಕಾದರೂ ಗೋವು ಕಡಿಯಲಿ ಎಂದು ಸಿದ್ದರಾಮಯಯ್ಯ, ಡಿಕೆಶಿ ಹೇಳಿಲಿ. ಈ ಕುರಿತು ಸಿದ್ದರಾಮಯ್ಯ, ಡಿಕೆಶಿ  ಮನೆಯ ಹೆಣ್ಣುಮಕ್ಖಳು ಮಾತನಾಡಲಿ ಎಂದಿದ್ದಾರೆ. ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗಾಂಧಿ ಕುಟುಂಬ ಕ್ರಾಸ್ ಬ್ರೀಡ್ ಅಂತ ಒಪ್ತೀರಾ? ಎಂದು ಪ್ರಶ್ನಿಸಿದ್ದಾರೆ. ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕ್ರಾಸ್ ಬ್ರೀಡ್ ಅಂತ ಒಪ್ಪುತ್ತೀರಾ. ಸಿದ್ದರಾಮಯ್ಯಗೆ ದೇಶದ ಸಂಸ್ಕೃತಿ ಗೊತ್ತಿಲ್ಲ. ಕ್ರಾಸ್ ಬ್ರೀಡ್ ಪದ ಬಳಸೋದು ನಮ್ಮ ಸಂಸ್ಕೃತಿಯಲ್ಲ ಎಂದು ಕಿಡಿಕಾರಿದ್ದಾರೆ.rahul-priyanka-gandhi-cross-breed-minister-ks-eshwarappa-against-siddaramaiah

ಲವ್ ಜಿಹಾದ್ ಹೆಸರಲ್ಲಿ ಹೆಣ್ಣು ಮಕ್ಕಳ ಮಾರಾಟ

ಲವ್ ಜಿಹಾದ್ ನಲ್ಲಿ ನಾಟಕ ಮಾಡಿ ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ.

key words : Rahul Priyanka Gandhi -cross breed- Minister -KS Eshwarappa – against- Siddaramaiah