Sunday, August 23, 2026

BDA Apartments

Home Front Page ಹೆಚ್ಚಿದ ರೈತರ ಪ್ರತಿಭಟನೆ: ಅಮಿತ್ ಶಾ ಭೇಟಿ ಮಾಡಿದ ಹರಿಯಾಣ ಸಿಎಂ

ಹೆಚ್ಚಿದ ರೈತರ ಪ್ರತಿಭಟನೆ: ಅಮಿತ್ ಶಾ ಭೇಟಿ ಮಾಡಿದ ಹರಿಯಾಣ ಸಿಎಂ

ನವದೆಹಲಿ, ನವೆಂಬರ್ 29, 2020 (www.justkannada.in): ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ, ರೈತರು ಪ್ರತಿಭಟನೆ ಮುಂದುವರೆಸಿರುವ ಹಿನ್ನೆಲೆ ಚರ್ಚೆ ನಡೆಸಲು ಸಿಎಂ ಖಟ್ಟರ್​ ಅವರು ಅಮಿತಾ ಶಾರನ್ನು ಭೇಟಿಯಾಗಿದ್ದಾರೆ.

ಇನ್ನು ರೈತರ ಪ್ರತಿಭಟನೆ ಕುರಿತು ಮಾತನಾಡಲು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರಿಗೆ ಮೂರು ದಿನಗಳಿಂದ ಕರೆ ಮಾಡುತ್ತಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ.