Sunday, August 2, 2026

BDA Apartments

Home Front Page ಸಚಿವರಾಗಲಿ,ಅಧಿಕಾರಿಗಳಾಗಲಿ ಯಾರೂ ಸಹ ಸಿಎಂ ನಿಯಂತ್ರಣದಲ್ಲಿ ಇಲ್ಲ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟೀಕೆ

ಸಚಿವರಾಗಲಿ,ಅಧಿಕಾರಿಗಳಾಗಲಿ ಯಾರೂ ಸಹ ಸಿಎಂ ನಿಯಂತ್ರಣದಲ್ಲಿ ಇಲ್ಲ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟೀಕೆ

ಬೆಂಗಳೂರು,ಅಕ್ಟೋಬರ್,26,2020(www.justkannada.in) : ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದ ಸಾಕಷ್ಟು ಹಾನಿಯೂ ಆಗಿದೆ. ಆದರೆ, ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರೂ ಸಹ ಸಿಎಂ ನಿಯಂತ್ರಣದಲ್ಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.jk-logo-justkannada-logo

ದಿನ ನಿತ್ಯದ ಪರದಾಟಗಳು ಸರಕಾರದ ಕಣ್ಣಿಗೆ ಕಾಣುತ್ತಿಲ್ಲ

ಅತಿವೃಷ್ಟಿಯಿಂದ ಜನರು ಅನುಭವಿಸುತ್ತಿರುವ ನೋವುಗಳು, ದಿನ ನಿತ್ಯದ ಪರದಾಟಗಳು ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ಕಾರಣ ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರೂ ಸಹ ಸಿಎಂ ನಿಯಂತ್ರಣದಲ್ಲಿ ಇಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಸರ್ವಪಕ್ಷ ನಿಯೋಗವನ್ನೂ ಕೊಂಡೊಯ್ಯುತ್ತಿಲ್ಲ

ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನರಿಗೆ ಅಗತ್ಯತೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಿಲ್ಲ. ದೆಹಲಿಗೆ ಸರ್ವಪಕ್ಷ ನಿಯೋಗವನ್ನೂ ಕೊಂಡೊಯ್ಯುತ್ತಿಲ್ಲ. ಬಿಜೆಪಿ ಸಂಸದರೊಂದಿಗೆ ಹೋಗಿ ಕೇಂದ್ರದ ಬಳಿ ಹಣ ಕೇಳುವ ಸಾಮರ್ಥ್ಯವೂ ಈ ಸರಕಾರಕ್ಕಿಲ್ಲ ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.

key words :CM-not-control-ministers-officials-KPCC-president Dikeshi