ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ : ಹೆಚ್.ವಿಶ್ವನಾಥ್ ತಿರುಗೇಟು

ಬೆಂಗಳೂರು,ಅಕ್ಟೋಬರ್,23,2020(www.justkannada.in) : ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ. ನೀವು ಒಬ್ಬ ರಾಜಕೀಯ ಮುತ್ಸದ್ದಿಯಂತೆ ವರ್ತನೆ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.jk-logo-justkannada-logo

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಟ್ವೀಟ್ ಮಾಡಿರುವುದಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

‘ಹೌದು ಹುಲಿಯಾ’ ಎನ್ನುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ‘ಕನಕಪುರ ಬಂಡೆ’ ಅಂದಾಗ ಡಿಕೆಶಿ ಸದನದಲ್ಲಿ ಖುಷಿಪಟ್ಟಿದ್ದಾರೆ. ಇವೆಲ್ಲ ನಿಮ್ಮ ಅಭಿಮಾನಿಗಳು ಕೊಟ್ಟಿರುವ ಬಿರುದುಗಳು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟಿರುವ ಬಿರುದುಗಳಲ್ಲ ಎಂದು ಟಾಂಗ್ ನೀಡಿದ್ದಾರೆ.

Siddaramaiah-like-court-clown-Don't-act-H.Vishwanath

ಕಾಡಿನ ಜನರಿಗೆ ನೀವು ಮಾಡಿರುವಂತಹ ಅವಮಾನ

ಸಿದ್ಧರಾಮಯ್ಯನವರೇ ಈಗ ನೀವು ಬಳಸಿದ ಭಾಷೆಯನ್ನು ಒಪ್ಪುವಂತಹುದಲ್ಲ. ಅದು ಕಾಡಿನ ಜನರಿಗೆ ನೀವು ಮಾಡಿರುವಂತಹ ಅವಮಾನವಾಗಿದೆ. ಸಿದ್ದರಾಮಯ್ಯನವರಿಗೆ ಏಕವಚನ, ಬಹುವಚನ ಕೂಡ ಗೊತ್ತಿಲ್ಲ. ಆದರೆ, ಅವರು ಬೇರೆಯವರಿಗೆ ಸಂಧಿ ಪಾಠ ಮಾಡುತ್ತಾರೆ. ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ. ಜನ ನಿಮ್ಮ ತಲೆ ಖಾಲಿಯಾಗಿ ವಿವೇಚನೆ ಇಲ್ಲ ಎಂದುಕೊಳ್ಳುತ್ತಾರೆ ಎಂದು ವಿಶ್ವನಾಥ್ ಟೀಕಿಸಿದ್ದಾರೆ.

key words : Siddaramaiah-like-court-clown-Don’t-act-H.Vishwanath