ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುಣ್ಯ ಸ್ಮರಣೆ: ಹುಟ್ಟೂರಿನಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಕೆ…

ಮೈಸೂರು,ಜೂ,6,2019(www.justkannada.in): ಇಂದು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ 37ನೇ ಪುಣ್ಯಸ್ಮರಣೆ ಹಿನ್ನೆಲೆ ದೇವರಾಜ ಅರಸು ಅವರ ಹುಟ್ಟೂರು ಕಲ್ಲಹಳ್ಳಿಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವರಾಜ ಅರಸು ಹುಟ್ಟೂರು ಹುಣಸೂರಿನ  ಕಲ್ಲಹಳ್ಳಿಯಲ್ಲಿ ಸಮಾಧಿಗೆ ಮಾಜಿ ಸಚಿವ, ಶಾಸಕ ವಿಶ್ವನಾಥ್ ರಿಂದ ಪುಷ್ಪರ್ಚಾನೆ ಮಾಡಿದರು. ನಂತರ ವಿಶ್ವನಾಥ್  ಅವರು ಅರಸು ಅವರ ಸಮಾಧಿಗೆ ವಿಶೇಷ ನಮನ ಸಲ್ಲಿಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಇನ್ನಿತರು ಭಾಗಿಯಾಗಿದ್ದರು.

Key words: #formerChiefMinister #DevarajArasu #Specialworship #submission #tomb