Wednesday, August 26, 2026

BDA Apartments

Home Front Page ನನಗೂ ಅವಕಾಶ ಸಿಕ್ಕರೇ ಪ್ರಧಾನಿಯಾಗುವ ಆಸೆ ಇದೆ- ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಎಂದ ಮಾಜಿ ಸಿಎಂ...

ನನಗೂ ಅವಕಾಶ ಸಿಕ್ಕರೇ ಪ್ರಧಾನಿಯಾಗುವ ಆಸೆ ಇದೆ- ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಎಂದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ

ಬೆಳಗಾವಿ,ಡಿ,4,2019(www.justkannada.in):  ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ನನಗೂ ಅವಕಾಶ ಸಿಕ್ಕರೆ ಪ್ರಧಾನಿಯಾಗುವ ಆಸೆ ಇದೆ. ಆದರೆ ಆಗದೆ ಇರುವುದರ ಬಗ್ಗೆ ಹೇಳೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಮನುಷ್ಯ ಆಸೆ ಪಡುವುದರಲ್ಲಿ ತಪ್ಪಿಲ್ಲ. ನನಗೂ ಅವಕಾಶ ಸಿಕ್ಕರೇ ಪ್ರಧಾನಿಯಾಗುವ ಆಸೆ ಇದೆ. ಆದರೆ ಆಗದೆ ಇರುವುದರ ಬಗ್ಗೆ ಆಸೆ ಪಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯಗೆ ಲೇವಡಿ ಮಾಡಿದರು.

ಅವರಿಬ್ಬರೂ ಒಂದಾದ್ರೆ ಏನಾಗುತ್ತೋ ಗೊತ್ತಿಲ್ಲ…

ಡಿಸೆಂಬರ್ 9 ರಂದು ಸಿಹಿಸುದ್ದಿ ನೀಡುತ್ತೇವೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ,  ಮಲ್ಲಿಕಾರ್ಜುನ ಖರ್ಗೆ ಅನುಭವಿಗಳು.  ಅವರದ್ದು ಲೂಸ್ ಟಾಕಿಂಗ್ ಅಲ್ಲ. ಖರ್ಗೆ ಏನು ಮಾಡ್ತಾರೆ ಎಂದು ಕಾತರದಿಂದ ಕಾಯುತ್ತಿದ್ದೇವೆ.  ಖರ್ಗೆ ಅವರ ಮಾತುಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅವರು ಯಾವತ್ತೂ ಹಗುರವಾಗಿ ಮಾತನಾಡಲ್ಲ.  ಅವರಿಗೆ ರಾಜಕೀಯದಲ್ಲಿ ದೇವೇಗೌಡರಿಗಿಂತ ಅನುಭವ ಜಾಸ್ತಿ ಇದೆ. ಈ ಇಬ್ಬರು ಸೇರಿದರೇ ಏನಾದ್ರೂ ಮಾಡ್ತಾರೆ. ಅವರಿಬ್ಬರು ಸೇರಿದ್ರೆ ಏನಾಗುತ್ತದೆ ಎಂದು ಹೇಳಲು ಆಗಲ್ಲ ಎಂದು ತಿಳಿಸಿದರು.

Key words: desire – become- Prime Minister –opportunity-DCM- Laxman Sawadi- former CM Siddaramaiah