Sunday, August 23, 2026

BDA Apartments

Home Cinema ಸಂಸದ ಪ್ರತಾಪ್ ಸಿಂಹಗೆ ಅಭಿನಂದನೆ ತಿಳಿಸಿದ ರಶ್ಮಿಕಾ ಮಂದಣ್ಣ

ಸಂಸದ ಪ್ರತಾಪ್ ಸಿಂಹಗೆ ಅಭಿನಂದನೆ ತಿಳಿಸಿದ ರಶ್ಮಿಕಾ ಮಂದಣ್ಣ

ಬೆಂಗಳೂರು, ನವೆಂಬರ್ 05, 2019 (www.justkannada.in): ರಶ್ಮಿಕಾ ಮಂದಣ್ಣ ಸಂಸದ ಪ್ರತಾಪ್ ಸಿಂಹ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ನಿರ್ಮಿಸಲು 100 ಕೋಟಿ ರೂ. ಮಂಜೂರಾಗಿದೆ ಎಂಬ ಸುದ್ದಿಯನ್ನು ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಪೇಜ್ ಮೂಲಕ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಅಭಿನಂದನೆ ಸಲ್ಲಿಸಿದ್ದಾರೆ.

ಎಮರ್ಜೆನ್ಸಿ ಹಾಸ್ಪಿಟಲ್ ಫಾರ್ ಕೊಡಗು ಎಂಬ ಹ್ಯಾಶ್ ಟ್ಯಾಗ್ ನಲ್ಲಿ ದೊಡ್ಡ ಅಭಿಯಾನ ಆರಂಭವಾಗಿತ್ತು. ಇದಕ್ಕೆ ರಶ್ಮಿಕಾ ಕೂಡಾ ಕೈ ಜೋಡಿಸಿದ್ದರು. ಈ ಕುರಿತು ಪ್ರತಾಪ್ ಸಿಂಹ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು.