Monday, August 10, 2026

BDA Apartments

Home Front Page ಹೈಕಮಾಂಡ್ ಸೂಚನೆ ಕೊಟ್ರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದ- ಸಚಿವ ಪುಟ್ಟರಂಗಶೆಟ್ಟಿ

ಹೈಕಮಾಂಡ್ ಸೂಚನೆ ಕೊಟ್ರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದ- ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ,ಆಗಸ್ಟ್,10,2026 (www.justkannada.in):  ಹೈಕಮಾಂಡ್ ಸೂಚನೆ ಕೊಟ್ಟರೇ  ಸಚಿವ ಸ್ಥಾನ ತ್ಯಾಗ ಮಾಡಲೂ ಸಿದ್ದನಿದ್ದೇನೆ ಎಂದು ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಇವತ್ತು ಅಥವಾ ನಾಳೇ ಖಾತೆ ಹಂಚಿಕೆಯಾಗುವ  ಸಾಧ್ಯತೆ ಇದೆ. ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ದನಿದ್ದೇನೆ.  ಹೈಕಮಾಂಡ್ ಸೂಚನೆ ಕೊಟ್ಟರೇ ಸಚಿವ ಸ್ಥಾಸ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದರು.

ನೊಂದ ಶಾಸಕರಿಗೆ ಹೆಚ್ ಡಿ ಕುಮಾರಸ್ವಾಮಿ ಆಹ್ವಾನ ವಿಚಾರ, ಮೊದಲಿನಿಂದಲೂ ಹೆಚ್ ಡಿ ಕುಮಾರಸ್ವಾಮಿ ಅವರದ್ದು ಇದೇ ಬುದ್ದಿ. ಅವರು ಯಾವಾಗಲಾದರೂ ನಿಶ್ಚಲ ಬಹುಮತ ಪಡೆದಿದ್ದಾರಾ? ಬರೀ ಯಾವಾಗಲೂ ಇದಕ್ಕೆ ಕಾಯುತ್ತಿರುತ್ತಾರೆ. ಹೆಚ್ ಡಿಕೆ ಮುಂದೆ ಕಿಂಗ್ ಅಥವಾ ಕಿಂಗ್ ಮೇಕರ್ ಆಗಲ್ಲ ಎಂದು ಟಾಂಗ್ ಕೊಟ್ಟರು.

Key words: High command, ready, minister’s position, Minister, Puttarangshetty