Thursday, August 6, 2026

BDA Apartments

Home Cinema ರೇಣುಕಾಸ್ವಾಮಿ ಕೊಲೆ ಕೇಸ್ : ಮಾಫಿಸಾಕ್ಷಿ ಮಾಡಲು ಮತ್ತಿಬ್ಬರಿಂದ ಮನವಿ

ರೇಣುಕಾಸ್ವಾಮಿ ಕೊಲೆ ಕೇಸ್ : ಮಾಫಿಸಾಕ್ಷಿ ಮಾಡಲು ಮತ್ತಿಬ್ಬರಿಂದ ಮನವಿ

ಬೆಂಗಳೂರು,ಆಗಸ್ಟ್,6,2026 (www.justkannada.in):   ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿ ಮಾಡುವಂತೆ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಎ14 ಪ್ರದೋಷ್ ಮಾಫಿ ಸಾಕ್ಷಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ  59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಮತ್ತಿಬ್ಬರನ್ನು ಮಾಫಿ ಸಾಕ್ಷಿ ಮಾಡುವಂತೆ ವಕೀಲರು ಮನವಿ ಮಾಡಿದ್ದಾರೆ.  ಪ್ರಕರಣದ ಎ8 ರವಿಶಂಕರ್, ಎ10  ವಿನಯ್ ಪರ ವಕೀಲರು ಈ  ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಮದ್ಯಾಹ್ನ ಅರ್ಜಿ ಸಲ್ಲಿಸುವುದಾಗಿ ಕೋರ್ಟ್ ಗೆ ವಕೀಲರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪ್ರದೋಷ್ ಪರ ವಕೀಲ ದಿವಾಕರ್  ನಮ್ಮ ಅರ್ಜಿ ಜೊತೆ ಸೇರಿಸದಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ..  ನಮ್ಮ ಕಕ್ಷಿದಾರರ ಹೇಳಿಕೆ ದಾಖಲಿಸುತ್ತೇವೆ. ನಂತರ ಪ್ರಾಸಿಕ್ಯೂಷನ್ ನಿರ್ಧರಿಸಿ ಎಂದು ವಕೀಲ ದಿವಾಕರ್ ಮನವಿ ಮಾಡಿದ್ದು  59ನೇ ಸೆಷನ್ಸ್ ನ್ಯಾಯಾಲಯ ಕೆಲಕಾಲ ವಿಚಾರಣೆ ಮುಂದೂಡಿದೆ. ಈ ಮೂಲಕ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Key words: Renukaswamy, murder case, Two Accused, request, Apology witness