ಶಿವಮೊಗ್ಗ,ಜುಲೈ,29,2026 (www.justkannada.in): ತಮಿಳುನಾಡು ಸಿಎಂ ಖುಷಿ ಪಡಿಸಲು ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದರು. ಸಿಎಂ ಡಿಕೆ ಶಿವಕುಮಾರ್ ಅವರೇ ಏಕೆ ಇಂತಹ ಕಪಟ ನಾಟಕ ಮಾಡುತ್ತೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.
ಇಂದು ಮಾತನಾಡಿದ ಬಿವೈ ವಿಜಯೇಂದ್ರ, ನಿನ್ನೆ ಆದೇಶ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಸಿಎಂ ಕೆಲವು ದಿನದ ಹಿಂದೆ ಆ ಭಾಗದ ರೈತರಿಗೆ ಕರೆ ಕೊಟ್ಟಿದ್ದರು. ಬರ ಪರಿಸ್ಥಿತಿ ಇದೆ. ಯಾರೂ ಬೆಳೆ ಬೆಳೆಯಬೇಡಿ ಎಂದಿದ್ದರು. ಸಿಎಂ ಆಗಿ ರೈತರಿಗೆ ಧೈರ್ಯ ತುಂಬಬೇಕಿತ್ತು. ಆದರೆ ಸಿಎಂ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯಮಾಡಿದರು. ಸಿಎಂ ಡಿಕೆ ಶಿವಕುಮಾರ್ ಅವರೇ ಏಕೆ ಇಂತಹ ಕಪಟ ನಾಟಕ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಕೆಆರ್ ಎಸ್ ನಲ್ಲಿ 17.39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ . ಉಳಿದ 12 ರಿಂದ 13 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟರೇ ರೈತರ ಗತಿಯೇನು? ಸಿಎಂ ಡಿಕೆ ಶಿವಕುಮಾರ್ ಏಕೆ ಕಾವೇರಿ ಕೊಳ್ಳದ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದೀರಿ. ಈ ಚೆಲ್ಲಾಟ ಆಡೋದು ಬಿಟ್ಟು ಮರುಪರಿಶೀಲನಾ ಅರ್ಜಿ ಸಲ್ಲಿಸಲಿ. ಸಿಡಬ್ಲ್ಯು ಆರ್ ಸಿ ಮುಂದೆ ಸರಿಯಾದ ರೀತಿ ವಾದ ಮಂಡಿಸಬೇಕು ಎಂದು ಬಿವೈ ವಿಜಯೇಂದ್ರ ಸಲಹೆ ನೀಡಿದರು.
Key words: Farmers, Tamil Nadu, Water, CM, DK Shivakumar, BY Vijayendra






