ಬೆಂಗಳೂರು,ಜುಲೈ,29,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಮ್ಮಲ್ಲಿ ನೀರು ಇದ್ದರೇ ತಾನೇ ಬಿಡೋಕೆ ಆಗೋದು. ವಾಟರ್ ಕಮಿಷನ್ ಗಳೂ ನದಿಪಾತ್ರದ ಕೆಳಗಿನ ಪರವಾಗಿ ಇರುತ್ತವೆ. ಈಗ ಸಂಕಷ್ಟ ಸೂತ್ರ ಪಾಲನೆ ಆಗಬೇಕಾಗುತ್ತದೆ. ನಮ್ಮ ಲಭ್ಯತೆ ಅಗತ್ಯತೆ ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸಿಎಂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಲಾಭವಿದೆ. ಆದರೆ ಕೇವಲ ರಾಜಕೀಯ ಕಾರಣಕ್ಕೆ ಮಾತ್ರ ವಿರೋಧಿಸಲಾಗುತ್ತೆ. ಸಿಎಂ ಡಿಕೆ ಶಿವಕುಮಾರ್ ಕೂಡ ಜಲಸಂಪನ್ಮೂಲ ಸಚಿವರಾಗಿದ್ದವರು ಅವರು ತಮಿಳನಾಡು ಸಿಎಂ ವಿಜಯ್ ಜೊತೆ ಮಾತನಾಡುತ್ತಾರೆ ಎಂದರು.
Key words: Order, release, water, Tamil Nadu, Minister, M.B. Patil







