Thursday, August 27, 2026

BDA Apartments

Home Front Page ಮೈಸೂರು ದಸರಾ: ಸಂಸದ ಯದುವೀರ್ ಹೇಳಿಕೆಗೆ ನನ್ನ ಸಹಮತವಿದೆ- ಶಾಸಕ ಶ್ರೀವತ್ಸ

ಮೈಸೂರು ದಸರಾ: ಸಂಸದ ಯದುವೀರ್ ಹೇಳಿಕೆಗೆ ನನ್ನ ಸಹಮತವಿದೆ- ಶಾಸಕ ಶ್ರೀವತ್ಸ

ಮೈಸೂರು,ಜುಲೈ,11,2026 (www.justkannada.in): ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಬೇಡ ಎನ್ನುವ ಸಂಸದ ಯದುವೀರ್ ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಶ್ರೀವತ್ಸ, ಕಂಬಳ ಬೇಡ ಎಂದು ದಸರಾ ಉನ್ನತ ಮಟ್ಟದ ಸಭೆಯಲ್ಲಿ ಹೇಳಿದ್ದೇವೆ. ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತವಾಗುವುದರ ಬಗ್ಗೆ ತಿಳಿಸಿದ್ದಾರೆ ಮೈಸೂರು ದಸರಾ ಕಮರ್ಶಿಯಲ್ ಆಗೋದು ಬೇಡ.  ದಸರಾ ಆಚರಣೆ ಸಾಂಸ್ಕೃತಿಕ ಹಬ್ಬವಾಗಿ ನಡೆಯಲಿ ಎಂದರು.

ಸುತ್ತೂರು ಸಂಸ್ಥಾನಕ್ಕೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿಲ್ಲ.  ಈ ಬಾರಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ.  ಮೈಸೂರು ದಸರಾ ಉದ್ಗಾಟಕರ ಆಯ್ಕೆ ಸಿಎಂಗೆ ಬಿಟ್ಟಿದ್ದೇವೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.

Key words: Mysore Dasara, Kambala, MP Yaduveer, MLA,  Srivatsa