ಬೆಂಗಳೂರು,ಜೂನ್,13,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಅವರ ಕನಸಿನ ಕೂಸಲ್ಲ ನನ್ನ ಕನಸಿನ ಕೂಸು. ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಅವತ್ತಿನ ನನ್ನ ಉದ್ದೇಶ ಬೇರೆ ಇತ್ತು. ಆದರೆ ಇವತ್ತಿನ ಉದ್ದೇಶ ಬೇರೆಯೇ ಇದೆ. ಬಿಡಿದ ಟೌನ್ ಶೀಪ್ ಎಂದರೇ ಲೂಟಿ ಸ್ಕೀಮ್ ಡೌಟೇಬೇಡ. ನಿಮಗೆ ನಿಜಕ್ಕೂ ರೈತರ ಬಗ್ಗೆ ಕಳಕಳಿ ಇದೆಯಾ? ಡಿಕೆಶೀ ಅವರೇ ದಿನ ಅಜ್ಜಯ್ಯನ ಬಳಿ ಹೋಗುತ್ತಿರಲ್ಲ ನಿಮಗೆ ಯಾವ ರೀತಿ ಬದುಕಬೇಕು ಎಂದು ಕರುಣೆ ತೋರಿಸಿಲ್ಲ. ನಿಮಗೆ ಅಜ್ಜಯ್ಯನ ರಕ್ಷಣೆ ಇದೆ ಎಲ್ಲದಕ್ಕೂ ಅಜ್ಜಯ್ಯ ಬಳಿ ಹೋಗುತ್ತಿರಿ . ಅಜ್ಜಯ್ಯ ಹೇಳಿದ್ದಾರಾ ಟೌನ್ ಶಿಪ್ ಮಾಡಿ ರೈತರ ಒಕ್ಕಲೆಬ್ಬಿಸಿ ಎಂದು ಎಂದು ಚಾಟಿ ಬೀಸಿದರು.
ಜೆಡಿಎಸ್ ನಿಂದ ಪ್ರತಿಭಟನೆ ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಸಿದ್ದವಾಗಿದ್ದೇವೆ. ಇಲ್ಲಿ ರೈತ ಮುಖಂಡರನ್ನ ಬಂಧಿಸುವ ಕೆಲಸವಾಗುತ್ತಿದೆ ಅಗತ್ಯವಿದ್ದರೇ ನಾನೇ ಹೋರಾಟಕ್ಕೆ ಹೋಗುವೆ. 450 ದಿನದಿಂದ ಹೋರಾಟ ಮಾಡುತ್ತಿರುವವರ ಧ್ವನಿಯಾಗಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
Key words: Bidadi, townships, farmers”, HDK, CM DK Shivakumar







