ಬೆಂಗಳೂರು,ಜೂನ್,8,2026 (www.justkannada.in): ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 45 ಜನರಿಂದ ಹಣ ಪಡೆದು ವಂಚಿಸಿದ್ದ ಅಪ್ಪಮಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಂಶಾದ್ ಬೇಗಂ, ಮನ್ಸೂರ್ ಬಂಧಿತ ಅಪ್ಪ ಮಗಳು. ಕೇಂದ್ರ ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ 45 ಜನರಿಂದ ಸುಮಾರು 5.35 ಕೋಟಿ ರೂ. ಹಣ ಪಡೆದು ಆರೋಪಿಗಳು ವಂಚಿಸಿದ್ದರು ಎನ್ನಲಾಗಿದೆ. ಉತ್ತರ ಕರ್ನಾಟಕ ಮೂಲದ 45 ಜನರಿಂದ ಹಣ ಪಡೆದು ವಂಚನೆ ಮಾಡಿದ್ದರು ಎನ್ನಲಾಗಿದೆ.
ಇಬ್ಬರು ಆರೋಪಿಗಳು ನಂಬಿಸಿ ನಿರುದ್ಯೋಗಿಗಳ ಸಂಪರ್ಕ ಮಾಡಿ ಅಧಿಕಾರಿಗಳು, ರಾಜಕಾರಣಿಗಳು ಪರಿಚಯ ಎಂದು ನಂಬಿಸಿ ಬಳಿಕ ರೈಲ್ವೆ, ಆದಾಯ ತೆರಿಗೆ ಇಲಾಖೆ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆಯುತ್ತಿದ್ದರು. ಬಳಿಕ ನಕಲಿ ನೇಮಕಾತಿ ಪತ್ರ ನೀಡುತ್ತಿದ್ದರು. ಈ ಮಧ್ಯೆ ಬೆಂಗಳೂರು ಕೋಲ್ಕತ್ತಾ ಮುಂಬೈನಲ್ಲಿ ಟ್ರೈನಿಂಗ್ ಸೆಂಟರ್ ತೆರೆದು ಟ್ರೈನಿಂಗ್ ನೀಡಿ 4 ತಿಂಘಳ ಸಂಬಳವನ್ನೂ ನೀಡಿದ್ದರು.
ನಂತರ ಸಂಬಳ ಕೆಲಸ ಎರಡೂ ಮೋಸ ಎಂಬುದು ದೃಢವಾಗಿದ್ದು, ವಿಷಯ ಗೊತ್ತಾಗಿ ಮೋಸಹೋದ ನಿರುದ್ಯೋಗಿಗಳು ಸಿಸಿಬಿಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ಇದೀಗ ಸಿಸಿಬಿ ಪೊಲೀಸರು ಶಂಶಾದ್ ಬೇಗಂ, ಮನ್ಸೂರ್ ಇಬ್ಬರನ್ನು ಬಂಧಿಸಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
Key words: Father, daughter, cheated, Arrest, government job






