Friday, September 11, 2026

BDA Apartments

Home Front Page ಕರ್ನಾಟಕದ ಧ್ವನಿಯಾಗಿ HD ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸಿ- ಶಾಸಕ ಯತ್ನಾಳ್ ಆಗ್ರಹ

ಕರ್ನಾಟಕದ ಧ್ವನಿಯಾಗಿ HD ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸಿ- ಶಾಸಕ ಯತ್ನಾಳ್ ಆಗ್ರಹ

ರಾಮನಗರ,ಜೂನ್,8,2026 (www.justkannada.in):  ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಆದರೆ ಬಿಜೆಪಿ  ಏಕೆ  ಟಿಕೆಟ್ ಕೊಟ್ಟಿಲ್ಲ ಎಂಬುದು ಗೊತ್ತಿಲ್ಲ ಪ್ರಧಾನಿ ಮೋದಿ ಅವರಿಗೆ ಮೋದಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸುಧಾಮೂರ್ತಿ ಅವರನ್ನ ರಾಜ್ಯಸಭೆಗೆ ಕಳುಹಿಸಿದಂತೆ ನೇರವಾಗಿ ಹಚ್ ಡಿ ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸಿ. ಕರ್ನಾಟದ ಧ್ವನಿಯಾಗಿ ರಾಜ್ಯಸಭೆಗೆ ಕಳುಹಿಸಿ. ಇಳಿವಯಸ್ಸಿನಲ್ಲೂ ನೀರಾವರಿ, ಮೇಕೆದಾಟು ಯೋಜನೆ ಬಗ್ಗೆ ಎಚ್ ಡಿ ದೇವೇಗೌಡರು ಮಾತನಾಡುತ್ತಾರೆ. ಹೀಗಾಗಿ ಹೆಚ್ ಡಿಡಿಗೆ ಪ್ರಧಾನಿ ಮೋದಿ ಅವರು ಅವಕಾಶ ಕೊಡಬೇಕು ಎಂದರು.

Key words: HD Deve Gowda, Rajya Sabha, voice of Karnataka, MLA, Yatnal