Thursday, September 17, 2026

BDA Apartments

ಮಾಜಿ ಪ್ರಧಾನಿ ಹೆಚ್ ಡಿಡಿಗೆ ಕೈತಪ್ಪಿದ ರಾಜ್ಯಸಭಾ ಟಿಕೆಟ್: HDK, BJP ವಿರುದ್ದ ರಣದ...
Home Front Page ಮಾಜಿ ಪ್ರಧಾನಿ ಹೆಚ್ ಡಿಡಿಗೆ ಕೈತಪ್ಪಿದ ರಾಜ್ಯಸಭಾ ಟಿಕೆಟ್: HDK, BJP ವಿರುದ್ದ ರಣದೀಪ್ ಸಿಂಗ್...

ಮಾಜಿ ಪ್ರಧಾನಿ ಹೆಚ್ ಡಿಡಿಗೆ ಕೈತಪ್ಪಿದ ರಾಜ್ಯಸಭಾ ಟಿಕೆಟ್: HDK, BJP ವಿರುದ್ದ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ

ಬೆಂಗಳೂರು,ಜೂನ್,8,2026 (www.justkannada.in): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ವಿರುದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ‘ಕೇವಲ ಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಕುಮಾರಸ್ವಾಮಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿಗಳಿಗೆ ಆಗುತ್ತಿರುವ ನಿರಂತರ ಅಪಮಾನಗಳನ್ನು ಸಹಿಸಿಕೊಳ್ಳುತ್ತಿದ್ದಾರೆ  ಎಂದು ಟೀಕಿಸಿದ್ದಾರೆ.ಮಾಜಿ ಪ್ರಧಾನಿ ಹೆಚ್ ಡಿಡಿಗೆ ಕೈತಪ್ಪಿದ ರಾಜ್ಯಸಭಾ ಟಿಕೆಟ್ hdd

‘ಭಾನುವಾರ ಮಧ್ಯರಾತ್ರಿ ಬಿಜೆಪಿ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿದೆ. ಮಾಜಿ ಪ್ರಧಾನಿಗಿಂತ ಬಿಜೆಪಿಯ ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಉಸ್ತುವಾರಿಯಾಗಿದ್ದ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಅವರೇ ಮುಖ್ಯ ಎಂದು ಬಿಜೆಪಿ ಭಾವಿಸಿದೆ. ದೇವೇಗೌಡರಿಗೆ ಟಿಕೆಟ್ ಕೈತಪ್ಪಿದ್ದು ಬಿಜೆಪಿಯಿಂದ  ಆದ ಅವಮಾನ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಕುಟುಕಿದರು.BJP ವಿರುದ್ದ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ jk02_new jk02 new

Key words: Rajya Sabha, ticket, former PM, HD Devegowda, Randeep Singh Surjewala