ಬೆಂಗಳೂರು,ಜೂನ್,6,2026 (www.justkannada.in): ಖಾತೆ ಹಂಚಿಕೆ ವಿಚಾರವಾಗಿ ಸಚಿವರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಕುರಿತು ಆರೋಗ್ಯ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ನನಗ ಖಾತೆ ಮುಖ್ಯ ಅಲ್ಲ. ಕೆಲಸ ಮುಖ್ಯ. ಅಧಿಕಾರಕ್ಕೆ ಅಂಟಿಕೊಳ್ಳಬಾರದು ಅದು ಶಾಶ್ವತವಲ್ಲ. ದೇವರು ತೀರ್ಮಾನ ಮಾಡಿದರೇ ಬಂದೇ ಬರುತ್ತದೆ. ಇಲ್ಲದಿದ್ದರೇ ದೇವರು ಬೇರೆ ಏನಾದರೂ ಇಟ್ಟಿರುತ್ತಾನೆಂದು ಅರ್ಥ ಎಂದು ನುಡಿದರು.
ಪ್ರತಿಖಾತೆಯಲ್ಲೂ ಮಹತ್ವ ಇರುತ್ತೆ. ಸಣ್ಣ ಖಾತೆ ದೊಡ್ಡಖಾತೆ ಅಂತಾ ಇಲ್ಲ. ನಮ್ಮ ಸರ್ಕಾರದಲ್ಲಿ ಅಸಮಾಧಾನವಿಲ್ಲ ಎಂದರು.
ಬೆಂಗಳೂರು ನಗರಾಭಿವೃದ್ದಿ ಇಲಾಖೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಮಲಿಂಗರೆಡ್ಡಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರನ್ನ ಮನವೊಲಿಸುವ ಕೆಲಸವನ್ನ ಪಕ್ಷದ ನಾಯಕರು ಮಾಡುತ್ತಿದ್ದಾರೆ.
Key words: work, important, Minister, UT Khader






