ತಮಿಳುನಾಡಿನ ಜನರಿಗಾಗಿ ಕೆಲಸ: ದ್ವೇಷದ ರಾಜಕಾರಣ ಮಾಡಲ್ಲ- ಸಿಎಂ ವಿಜಯ್

ಚೆನ್ನೈ,ಮೇ,13,2026 (www.justkannada.in): ನಾನು ತಮಿಳುನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ ಯಾವುದೇ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ತಮಿಳುನಾಡಿನ ಸಿಎಂ ವಿಜಯ್ ತಿಳಿಸಿದರು.

ಇಂದು ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ವಿಶ್ವಾಸ ಮತಯಾಚನೆ ಮಾಡುತ್ತಿದ್ದು ಈ ವೇಳೆ ಮಾತನಾಡಿದರು.

ನಾನು ತಮಿಳುನಾಡಿನ ಜನರಿಗಾಗಿ ಕೆಲಸ ಮಾಡುತ್ತೇನೆ. ನಮ್ಮನ್ನು  ಬೆಂಬಲಿಸಿದ ಕಾಂಗ್ರೆಸ್,  ಮುಸ್ಲೀಂ ಲೀಕ್ ವಿಸಿಕೆ ಎಡಪಕ್ಷಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.  ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ. ನಮ್ಮ ವಿರೋಧಿಗಳನ್ನ ಅಭಿವೃದ್ದಿಯ ಭಾಗವಾಗಿಸಿಕೊಳ್ಳುತ್ತೇವೆ.   ನಮ್ಮ ಸರ್ಕಾರ ಕುದುರೆ ವ್ಯಾಪಾರದಲ್ಲಿ ತೊಡಗಲ್ಲ. ಹಿಂದಿನ ಸರ್ಕಾರದ ಯೋಜನೆಗಳು ಮುಂದುವರೆಯಲಿವೆ ಎಂದು ಭರವಸೆ ನೀಡಿದರು.

Key words: Work, people of Tamil Nadu, CM, Vijay