Saturday, September 5, 2026

BDA Apartments

Home Front Page ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ- ಕೆ.ಎನ್ ರಾಜಣ್ಣ

ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,21,2026 (www.justkannada.in):  ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ರಾಜಕಾರಣ ನಿಂತ ನೀರಲ್ಲ.  ನೀರು ಹರಿದರೇನೇ ಪರಿಶುದ್ದತೆ.  ರಾಜಕಾರಣ ಪರಿಶುದ್ದತೆ ಆಗಬೇಕಾದರೇ  ಬದಲಾವಣೆ ಆಗಬೇಕು ಎಂದರು.

ಸಿದ್ದರಾಮಯ್ಯರಿಗೆ ಯಾರಾದ್ರೂ ಮಾಟ ಮಂತ್ರ ಮಾಡಿಸಿರಬಹುದು.  ಸಿಎಂ ಸಿದ್ದರಾಮಯ್ಯ  ಇಷ್ಟೊಂದು ಅಸಹಾಯಕತೆ ಸ್ಥಿತಿ ನೋಡಿದರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು ಎಂದು ಯೋಚಿಸಿದ್ದೇನೆ. ನಾನು, ಸಿಎಂ ಇಬ್ಬರು ಮಾಟ ಮಂತ್ರ ನಂಬಲ್ಲ. ಆದರೆ ಜನ ಮಾತಾಡುತ್ತಿದ್ದಾರೆ.  ನಾನು ಹೇಳುತ್ತಿದ್ದೇನೆ ಎಂದರು.

Key words: Political developments, May, K.N. Rajanna