Wednesday, September 9, 2026

BDA Apartments

Home Front Page ಇದು ಪಕ್ಷದ ಆಂತರಿಕ ವಿಚಾರ:  ಹೀಗಾಗಿ ಕ್ರಮ ತೆಗೆದುಕೊಂಡಿದೆ-ಸಚಿವ ಈಶ್ವರ್ ಖಂಡ್ರೆ

ಇದು ಪಕ್ಷದ ಆಂತರಿಕ ವಿಚಾರ:  ಹೀಗಾಗಿ ಕ್ರಮ ತೆಗೆದುಕೊಂಡಿದೆ-ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು,ಏಪ್ರಿಲ್,17,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಂಡಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ಇದು ಪಕ್ಷದ ಆಂತರಿಕ ವಿಚಾರ. ಹೀಗಾಗಿ ಪಕ್ಷ ಕ್ರಮ ಕೈಗೊಂಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಫುಟ ಸಭೆಯಲ್ಲಿ ಏನು ಚರ್ಚೆಯಾಗಿದೆ ಗೊತ್ತಿಲ್ಲ.  ಕ್ಯಾಬಿನೆಟ್  ಚರ್ಚೆ ವೇಳೆ ನಾನು ಸ್ವಲ್ಬ ಬೇಗ ಹೊರಟೆ ಸಂಪುಟ ಸಭೆಯಲ್ಲಿ ಏನು ಚರ್ಚೆ ಆಗಿದೆ ನನಗೆ ಗೊತ್ತಿಲ್ಲ. ಇದು ಪಕ್ಷದ ಆಂತರಿಕ. ಪಕ್ಷ ಕ್ರಮ ತೆಗೆದುಕೊಂಡಿದೆ. ಏನೇ ಇದ್ದರೂ ನಮ್ಮ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ.  ನಮ್ಮ ವರಿಷ್ಠರು ಎಲ್ಲವನ್ನೂ ಸರಿಪಡಿಸುತ್ತಾರೆ. ಯಾವ ಸಚಿವರು ಏನು ಅಭೀಪ್ರಾಯ ತಿಳಿಸಿದ್ದಾರೆ ಮಾಹಿತಿ ಇಲ್ಲ ಎಂದರು.

Key words: Davanagere south, By election, internal matter, party, Minister, Ishwar Khandre