Friday, August 14, 2026

BDA Apartments

Home Front Page ಮೋದಿ, RSS ಬೈಯ್ಯುವುದನ್ನ ಪ್ರಿಯಾಂಕ್ ಖರ್ಗೆ ಸಾಧನೆ ಅಂದುಕೊಂಡಿದ್ದಾರೆ- ಸಂಸದ ಕಾಗೇರಿ ಕಿಡಿ

ಮೋದಿ, RSS ಬೈಯ್ಯುವುದನ್ನ ಪ್ರಿಯಾಂಕ್ ಖರ್ಗೆ ಸಾಧನೆ ಅಂದುಕೊಂಡಿದ್ದಾರೆ- ಸಂಸದ ಕಾಗೇರಿ ಕಿಡಿ

ಕಲಬುರಗಿ, ಏಪ್ರಿಲ್,3,2026 (www.justkannada.in):  ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಅನ್ನು ಬೈಯ್ಯುವುದನ್ನೇ ಸಚಿವ ಪ್ರಿಯಾಂಕ್ ಖರ್ಗೆ ಸಾಧನೆ ಅಂದು ಕೊಂಡಿದ್ದಾರೆ. ಅದರಿಂದ ಪ್ರಿಯಾಂಕ್ ಖರ್ಗೆಗೆ ಯಶಸ್ಸು ಸಿಗುವುದಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.

ಇಂದು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಿಯಾಂಖ್ ಖರ್ಗೆ ತಮ್ಮ ವ್ಯಕ್ತಿತ್ವವನ್ನು ಒಳ್ಳೇ ರೀತಿಯಲ್ಲಿ ಬೆಳೆಸಿಕೊಳ್ಳಲಿ. ಪ್ರಿಯಾಂಕ್ 3 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ. ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಒಂದೊಂದೇ ಹೇಳಲಿ.  ಬರೀ ವಿವಾದದ ಮಾತುಗಳನ್ನ ಆಡಬೇಡಿ  ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ?  ಮಾಫಿಯಾಗಳು ಕೆಲಸ ಮಾಡುತ್ತಿವೆ.  ಇಲ್ಲಿ ಪ್ರಿಯಾಂಕ್ ಖರ್ಗೆ ಮೊದಲು ಇವುಗಳನ್ನ ಸರಿಪಡಿಸಲಿ ಎಂದು ಗುಡುಗಿದರು.

ಸಿಎಂ ಡಿಸಿಎಂ ನಡುವಿನ ಕಚ್ಚಾದಿಂದ ರಾಜ್ಯ ದಿವಾಳಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಕುರ್ಚಿಗಾಗಿ ಹೋರಾಟ ನಡೆಸಿದ್ದಾರೆ ಇಬ್ಬರ ಕಚ್ಚಾಟದಿಂದ ರಾಜ್ಯದ ಅಭಿವೃದ್ದಿ ಕೆಲಸ ಆಗುತ್ತಿಲ್ಲ. ಜನತೆ ಕಾಂಗ್ರೆಸ್ ಆಡಳಿತದಿಂದ ಭ್ರಮನಿರಸನ ಆಗಿದ್ದಾರೆ ಎಂದು ಹರಿಹಾಯ್ದರು.

Key words:  Priyank Kharge, Modi, RSS,  defeat, achievement, MP, Kageri