ಬಿಜೆಪಿಗೆ ಸೋಲಿನ ಭಯ: ಅದಕ್ಕೆ ಯತ್ನಾಳ್ ಕರೆಸಿದ್ದಾರೆ- ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ,ಏಪ್ರಿಲ್,3,2026 (www.justkannada.in):  ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಣುತ್ತಿದೆ ಹೀಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕರೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಬಿಜೆಪಿಯವರಿಗೆ ಸೋಲುತ್ತೇವೆಂಬ ಭಯವಾಗಿದೆ.  ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕರೆಸಿದ್ದಾರೆ, ಬಿಜೆಪಿ ಯಾವಾಗಲೋ ಹೀನಾಯ ಸ್ಥಿತಿ ತಲುಪಿದೆ ಎಂದರು.

ಗ್ಯಾಸ್ ಗಾಗಿ ಆಟೋ ಚಾಲಕರ ಪರದಾಟ ಸಚಿವ ಮುನಿಯಪ್ಪಗೆ ಆಟೋ ಸಂಘಟನೆಗಳಿಂದ ಗಡುವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಎಲ್ ಪಿಜಿ ವ್ಯವಸ್ಥೆ ಕಲ್ಪಿಸಬೇಕಿರುವುದು ಕೇಂದ್ರದವರು ಮುತ್ತಿಗೆ ಹಾಕುವುದಿದ್ದರೆ ಮೋದಿ ಮನೆಗ ಮುತ್ತಿಗೆ ಹಾಕಲಿ ಎಂದರು.

Key words: BJP, fears, defeat, Yatnal, CM Siddaramaiah