ಬೆಂಗಳೂರು,ಮಾರ್ಚ್,27,2026 (www.justkannada.in): ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಯ ಕೇಂದ್ರ ಸರ್ಕಾರದ ನಿರ್ಧಾರವನ್ನ ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಲೆಕ್ಷನ್ ಗಾಗಿ ತೈಲಬೆಲೆ ಅಬಕಾರಿ ಸುಂಕ ಕಡಿಮೆ ಮಾಡಿದ್ದಾರೆ ತೈಲಬೆಲೆ ಜಾಸ್ತಿ ಮಾಡಿಬಿಟ್ಟು ಕೇಂದ್ರ ನಮ್ಮನ್ನ ಕೊಲೆ ಮಾಡುತ್ತಿದೆ. ಕಂಪನಿಯವರು ಕೂಡ ಜಾಸ್ತಿ ಮಾಡಿದ್ದಾರೆ ಎಂದರು.
ರಾಜ್ಯ ಸರ್ಕಾರ ಬೆಲೆ ಇಳಿಕೆ ಮಾಡುತ್ತಾ? ಎಂಬ ಪ್ರಶ್ನೆಗೆ ಅಮೇಲೆ ಮಾತನಾಡುತ್ತೇನೆ ನೋಡೋಣ ಎಂದರು.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಂಡಾಯದ ಬಿಸಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಲೋಕಲ್ ನವರು ಅರ್ಜಿ ಹಾಕಿದ್ದಾರೆ. ನಾನು ಜಮೀರ್ ಸಲೀಂ ಸಾದಿಕ್ ಸೇರಿದಂತೆ ಎಲ್ಲರೂ ಹೇಳಿದಂತೆ ಕೇಳುತ್ತೇವೆ. ಎಲ್ಲರೂ ನಮ್ಮವರೇ ಅಮೇಲೆ ನಮ್ಮ ಮಾತು ಕೇಳುತ್ತಾರೆ ಎಂದರು.
ಅಲ್ಪಸಂಖ್ಯಾತ ಮತಗಳು ವಿಭಜನೆ ಎನ್ನುವ ವಿಚಾರ ಯಾವುದೇ ಕಾರಣಕ್ಕೂ ಮತಗಳು ವಿಭಜನೆ ಆಗುವುದಿಲ್ಲ. ಸಮರ್ಥ್ ಒಳ್ಳೇ ಹುಡುಗ ಉಪಚುನಾವಣೆಯಲ್ಲಿ ಗೆಲ್ಲುತ್ತಾನೆ. ಶಾಮನೂರು ಕುಟುಂಬ ದಾವಣಗೆರೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: DCM, DK Shivakumar, oil price, excise duty, elections







