Tuesday, August 11, 2026

BDA Apartments

Home Front Page  ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ- ಸಚಿವ ಕೆ.ಎಚ್ ಮುನಿಯಪ್ಪ ಮನವಿ

 ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ- ಸಚಿವ ಕೆ.ಎಚ್ ಮುನಿಯಪ್ಪ ಮನವಿ

ಬೆಂಗಳೂರು,ಮಾರ್ಚ್,26,2026 (www.justkannada.in):  ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ. ಗ್ಯಾಸ್ ಏಜೆನ್ಸಿ ಮುಂದೆ ಕ್ಯೂ ನಿಲ್ಲಬೇಡಿ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ,  ಕಷ್ದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಮಿತವಾಗಿ ಬಳಕೆ ಮಾಡಿ. ಅಭಾವದ ಸಂದರ್ಭದಲ್ಲಿ ಅನಗತ್ಯವಾಗಿ ಗ್ಯಾಸ್ ಖರೀದಿಸಬೇಡಿ ಗ್ಯಾಸ್ ಖರೀದಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಬೇಡಿ ಪ್ರತನಿತ್ಯ 16 ಸಾವಿರ ಕಮರ್ಷಿಯಲ್ ಸಿಲಿಂಡರ್ ಕೊಡುತ್ತಿದ್ದೇವೆ.  ಹೋಟೆಲ್ ಗಳಿಗೆ ಅಗತ್ಯದ 20% ಸಿಲಿಂಡರ್  ಪೂರೈಸುತ್ತಿದ್ದೇವೆ. ಆಸ್ಪತ್ರೆಗಳಿಗೆ 100% ಸಿಲಿಂಡರ್ ಪೂರೈಸುತ್ತಿದೇವೆ ಎಂದರು.

ಗ್ರಾಹಕರು ಗ್ಯಾಸ್ ಏಜೆನ್ಸಿ ಹತ್ತಿರ ಹೋಗಿ ಕ್ಯೂ ನಿಲ್ಲುವುದು ಬೇಡ ನಗರಗಳಲ್ಲಿ  25 ದಿನ ಹಳ್ಳಿಗಳಲ್ಲಿ 45 ದಿನದ ನಂತರ ಗ್ಯಾಸ್ ಖರೀದಿಗೆ ಅವಕಾಶವಿದೆ.  ಯುದ್ದ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ ಮಾತುಕತೆ ನಡೆಯುತ್ತಿದೆ.  ಹೋಟೆಲ್ ಗಳಿಗೆ ಇನ್ನೂ ಹೆಚ್ಚಿನ ಸಿಲಿಂಡರ್ ಪೂರೈಕೆ  ಮಾಡಲಾಗುತ್ತದೆ. ಈ ಬಗ್ಗೆ ಸೋಮವಾರ ಸಭೆ ಮಾಡಿ ನಿರ್ಧಾರ ಮಾಡುತ್ತೇವೆ.  ಗ್ರಾಹಕರು ವಿನಾಕಾರಣ ಗ್ಯಾಸ್ ಏಜೆನ್ಸಿ ಬಳಿ ಕ್ಯೂ ನಿಲ್ಲಬೇಡಿ. ಬುಕ್ ಮಾಡಿದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ  ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words:  buy, gas, shortages, Minister, KH Muniyappa