Sunday, August 23, 2026

BDA Apartments

Home Front Page ಕಟ್ಟಾ ಕಾಂಗ್ರೆಸ್ಸಿಗರು ಬೀದಿನಾಯಿಗಳಲ್ಲ ನಿಯತ್ತಿನ ನಾಯಿಗಳು- ಡಿ.ಕೆ ಸುರೇಶ್

ಕಟ್ಟಾ ಕಾಂಗ್ರೆಸ್ಸಿಗರು ಬೀದಿನಾಯಿಗಳಲ್ಲ ನಿಯತ್ತಿನ ನಾಯಿಗಳು- ಡಿ.ಕೆ ಸುರೇಶ್

ಬೆಂಗಳೂರು,ಫೆಬ್ರವರಿ,17,2026 (www.justkannada.in):  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರ ಬೀದಿನಾಯಿ ಮಾತಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ  ಡಿ.ಕೆ ಸುರೇಶ್, ಕಟ್ಟಾ ಕಾಂಗ್ರೆಸ್ಸಿಗರು ಬೀದಿನಾಯಿಗಳಲ್ಲ ನಿಯತ್ತನಿನ ನಾಯಗಳು. ಎಂದಿಗೂ ಋಣ ತೀರಿಸುವ ವ್ಯಕ್ತಿತ್ವ ಇಟ್ಟುಕೊಂಡವರು   ಅದು ಬೀದಿ ನಾಯಿ ಆಗಿರಲಿ ಸಾಕು ನಾಯಿ ಆಗಿರಲಿ ಯಜಮಾನನಿಗೆ ಯಾವತ್ತಿಗೂ ಕೂಡ ಋಣ ತೀರಿಸುತ್ತದೆ ಎಂದು ತಿರುಗೇಟು ನೀಡಿದರು.

ಮಹದೇವಪ್ಪ ಅವರು ಯಾವುದೇ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಕಟ್ಟಾ ಕಾಂಗ್ರೆಸಿಗರು ಯಾರು ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕೋದು ಯಾತಕ್ಕೆ? ಅವು ನಮ್ಮನ್ನ ಕಾಯುತ್ತವೆ ಅಂತಾ ತಾನೇ’ ಎಂದು ಡಿಕೆ ಸುರೇಶ್ ಹೇಳಿದರು.

Key words: Congress, dogs, Minister, HC Mahadevappa, DK Suresh