Wednesday, August 5, 2026

BDA Apartments

Home Front Page ವಿಶೇಷ ಅಧಿವೇಶನ ಯಶಸ್ವಿಯಾಗದಿರಲಿ ಎಂದು ಬಿಜೆಪಿ ಅಹೋರಾತ್ರಿ ಧರಣಿ-ಸಚಿವ ಚಲುವರಾಯಸ್ವಾಮಿ

ವಿಶೇಷ ಅಧಿವೇಶನ ಯಶಸ್ವಿಯಾಗದಿರಲಿ ಎಂದು ಬಿಜೆಪಿ ಅಹೋರಾತ್ರಿ ಧರಣಿ-ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆಬ್ರವರಿ,4,2026 (www.justkannada.in):  ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ನಡೆಸಿದ ಅಹೋರಾತ್ರಿ ಧರಣಿ ವಿರುದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ರಾಜ್ಯಪಾಲರು ಭಾಷಣ ಮಾಡದಂತೆ ಬಿಜೆಪಿ ಹೈಕಮಾಂಡ್ ಮಾಡಿದೆ.  ಮನ್ ರೇಗಾ ಯೋಜನೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ.  ವಿಶೇಷ ಅಧಿವೇಶನ ಯಶಸ್ವಿ ಆಗಬಾರದು ಅಂತಾ ಧರಣಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸದನದಲ್ಲಿ ಆರ್.ಬಿ ತಿಮ್ಮಾಪುರ ವಿಚಾರ ಪ್ರಸ್ತಾಪಿಸಿ ಚರ್ಚಿಸುತ್ತಿದ್ದಾರೆ.  ಬಿಎಸಿ ಸಮಿತಿ ಸಭೆಯಲ್ಲಿ ಮನ್ ರೇಗಾ ಜಾರಿಗೆ ನಿರ್ಣಯ ಮಾಡಲಾಗಿದೆ.  ಅದರ ಬಳಿಕವೂ ನಿನ್ನೆ ರಾತ್ರಿಯಿಂದ ಧರಣಿ ಮಾಡುತ್ತಿದ್ದಾರೆ.  ಮನ ರೇಗಾ ವಿಚಾರದಲ್ಲಿ ಕೇಂದ್ರದ ವಿರುದ್ದ ನಿರ್ಣಯ ಬಿಜೆಪಿಗೆ ಇಷ್ಟವಿಲ್ಲ. ಬಿಜೆಪಿ ಜೆಡಿಎಸ್ ಸದಸ್ಯರಿಗೆ ನಾಚಿಕೆಯಾಗಬೇಕು ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

Key words: BJP, Protest, special session, Minister, Chaluvarayaswamy