ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮ: ಸಾಕ್ಷ್ಯ ಕೊಟ್ಟಿದ್ದೇವೆ- ಆರ್.ಅಶೋಕ್

ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮವಾಗಿದೆ. ನಾವು ಅಧಿಕಾರಿಗಳ ಆಡಿಯೋ ಸೇರಿ 5 ಸಾಕ್ಷ್ಯ ಕೊಟ್ಟಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ನುಡಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಆರ್.ಅಶೋಕ್,  ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ನೀಢಬೇಕು. ಈ ಹಿಂದೆ ಕೆ.ಜೆ ಜಾರ್ಜ್ ರಾಜೀನಾಮೆ ಕೊಟ್ಟು ಬಳಿಕ ಸಚಿವರಾಗಲಿಲ್ಲವೇ?  ಕೆಎಸ್ ಈಶ್ವರ‍ಪ್ಪ ರಾಜೀನಾಮೆ ಕೊಡಲಿಲ್ಲವೇ? ಎಂದು ಪ್ರಶ್ನಿಸಿದರು.

ಅಸ್ಸಾಂಗೆ  ಡಿಕೆ ಶಿವಕುಮಾರ್ ಉಸ್ತುವಾರಿ,  ಕೇರಳಾಗೆ ಕೆ.ಜೆ ಜಾರ್ಜ್ ಉಸ್ತುವಾರಿ.  ಆ ರಾಜ್ಯಗಳಿಗೆ ಕರ್ನಾಟಕದ ಹಣ ಹೋಗುತ್ತಿದೆ.  ಕಾಂಗ್ರೆಸ್ ಪಕ್ಷ ಕರ್ನಾಟಕವನ್ನ ಕೇವಲ ಎಟಿಎಂ ಮಾಡಿಕೊಂಡಿಲ್ಲ ರಿಸರ್ವ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿರೋದು ಸತ್ಯ ಸತ್ಯ ಎಂದು ಆರೋಪಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ, ಯಾವನೋ ಅಸೋಸಿಯೇಷನ್ ಅವನ ಮಾತು ಕೇಳುತ್ತೀರಾ? 6 ಸಾವಿರ ಕೋಟಿ ರೂಗೆ ಸಾಕ್ಷಿ ಕೊಡಿ ಎಂದು ಟಾಂಗ್ ಕೊಟ್ಟರು.

Key words: illegal, Excise Department, evidence, R. Ashok