Thursday, August 6, 2026

BDA Apartments

Home Front Page ಡಿ.21 ರಂದು ಸಿಎಂರಿಂದ ಪ್ರಜಾಸೌಧದ ಶಿಲಾನ್ಯಾಸ: ಸಿದ್ದತೆ ಪರಿಶೀಲಿಸಿದ ಡಿಸಿ ಡಾ.ಕುಮಾರ್

ಡಿ.21 ರಂದು ಸಿಎಂರಿಂದ ಪ್ರಜಾಸೌಧದ ಶಿಲಾನ್ಯಾಸ: ಸಿದ್ದತೆ ಪರಿಶೀಲಿಸಿದ ಡಿಸಿ ಡಾ.ಕುಮಾರ್

ಮಂಡ್ಯ,ಡಿಸೆಂಬರ್,21,2025 (www.justkannada.in): ಡಿಸೆಂಬರ್ 21 ರಂದು ಮಳವಳ್ಳಿ ತಾಲ್ಲೂಕಿನಲ್ಲಿ ನೂತನವಾಗಿ ರೂ. 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪ್ರಜಾಸೌಧದ ಶಿಲಾನ್ಯಾಸ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ  ಇಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ನೂತನ ಕಟ್ಟಡ ನಿರ್ಮಾಣದ ಜಾಗವನ್ನು ಪರಿಶೀಲಿಸಿದರು.  ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಹಶೀಲ್ದಾರ್ ರವರಿಗೆ ಸೂಚಿಸಿದರು.

ಮಾನ್ಯ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಸೂಕ್ತ ಪ್ರೊಟೊಕಾಲ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

Key words: CM, lay foundation, stone , Praja Soudha, Mandya, DC Dr. Kumar