ಸಿಎಂ ಡಿನ್ನರ್ ಗೆ ಕರೆದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಅಕ್ಟೋಬರ್,10,2025 (www.justkannada.in):  ಅಕ್ಟೋಬರ್ 13 ರಂದು  ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಔತಣ ಕೂಟ ಏರ್ಪಡಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಡಾ.ಜಿ.ಪರಮೇಶ್ವರ್,  ಸಿಎಂ ಸಿದ್ದರಾಮಯ್ಯ  ಈ ಹಿಂದೆಯೂ ಆನೇಕ ಬಾರಿ ಊಟಕ್ಕೆ ಕರೆದಿದ್ದಾರೆ.  ತುಂಬಾ ದಿನ ಆಗಿತ್ತು.  ಹೀಗಾಗಿ ಕರೆದಿದ್ದಾರೆ. ಸಿಎಂ ಡಿನ್ನರ್ ಕರೆಯುವುದಕ್ಕೆ ಯಾವುದೇ ವಿಶೇಷತೆ ಇಲ್ಲ.

ಊಟ ಹಾಕ್ತಾರೆ ನಾವು ಊಟ ಮಾಡಿಕೊಂಡು ಬರುತ್ತೇವೆ.  ಸಿಎಂ ಡಿನ್ನರ್ ಸಭೆ ಅಜೇಂಡಾ ಊಟ ಅಷ್ಟೆ . ಸಿಎಂ ಊಟಕ್ಕೆ ಕರೆದಿರುವುದು ಒಂದು ಸಾಮಾನ್ಯ ಸಭೆ ಅಷ್ಟೆ ಎಂದು ಪರಮೇಶ್ವರ್ ತಿಳಿಸಿದರು.

Key words: nothing, special, CM, dinner, Home Minister, Dr. G. Parameshwar