Friday, August 14, 2026

BDA Apartments

Home Front Page ಅನರ್ಹರ ಪಡಿತರ ಕಾರ್ಡ್ ರದ್ದು ಮಾಡಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಅನರ್ಹರ ಪಡಿತರ ಕಾರ್ಡ್ ರದ್ದು ಮಾಡಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಹುಬ್ಬಳ್ಳಿ,ಸೆಪ್ಟಂಬರ್,17,2025 (www.justkannada.in):  ಅನರ್ಹರ ಪಡಿತರ ಕಾರ್ಡ್ ರದ್ದು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅನರ್ಹರ ಪಡಿತರ ಕಾರ್ಡ್ ರದ್ದು ಮಾಡಿ. ಬಿಪಿಎಲ್ ಪಡೆದ ಅನರ್ಹರು ಬಹಳ ಮಂದಿ ಇದ್ದಾರೆ. ಹೀಗಾಗಿ  ಪರಿಶೀಲನೆ ನಡೆಸಿ ಅವುಗಳನ್ನ ರದ್ದುಪಡಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಎಲ್ಲಾ ರಾಜ್ಯಗಳಿಗೂ  ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತಂತ್ರಜ್ಞಾನದಿಂದ ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

Key words: Cancel, Ineligible, ration card, Union Minister, Pralhad Joshi