Wednesday, August 12, 2026

BDA Apartments

Home Front Page ಒಳ ಮೀಸಲಾತಿ ಮಂಡನೆ: ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ- ಸಚಿವ ಹೆಚ್.ಕೆ ಪಾಟೀಲ್

ಒಳ ಮೀಸಲಾತಿ ಮಂಡನೆ: ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ- ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಆಗಸ್ಟ್,7,2025 (www.justkannada.in): ಬಹು ನಿರೀಕ್ಷಿತ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಆಗಸ್ಟ್ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿದೆ. ಈ ಕುರಿತು ಸಭೆ ಬಳಿಕ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಸಭೆಯಲ್ಲಿ ಒಳ ಮೀಸಲಾತಿ ಮಂಡನೆಯಾಗಿದೆ. ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಇದೆ. ವರದಿಯನ್ನ ಓದಿಕೊಂಡು ಬರಲು ಎಲ್ಲಾ ಸಚಿವರಿಗೆ ಸೂಚನೆ  ನೀಡಲಾಗಿದೆ ಎಂದರು.

ಒಳಮೀಸಲಾತಿ ಜಾರಿಗೆ ಯಾವ ಸಚಿವರೂ ಆಕ್ಷೇಪ ಮಾಡಿಲ್ಲ. ಆಗಸ್ಟ್ 16 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಸಚಿವ  ಹೆಚ್ ಕೆ ಪಾಟೀಲ್  ಹೇಳಿದರು.

Key words: Internal Reservation,  Meeting, Discussion, Minister, HK Patil