ಆರ್ಸಿಬಿ ಕಾಲ್ತುಳಿತ ದುರ್ಘಟನೆ : ಗುಪ್ತಚರ ಇಲಾಖೆ ವಿರುದ್ಧ ಮತ್ತೆ ಸಿಎಂ ಕಿಡಿ

RCB stampede incident: CM lashes out again against Intelligence Department The incident that took place during the RCB team's celebration has deeply hurt Chief Minister Siddaramaiah. It has been reported that he has once again expressed his anger over the dereliction of duty of the officials who led to the incident.

vtu

ಬೆಂಗಳೂರು, ಜೂ.೨೮,೨೦೨೫: ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ನಡೆದ ದುರ್ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನದ ಮೇಲೆ ತೀವ್ರ ಘಾಸಿ ಮಾಡಿದೆ. ಘಟನೆಗೆ ಕಾರಣವಾದ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಮತ್ತೆ ಆಕ್ರೋಶ ಹೊರ ಹಾಕಿದ ಘಟನೆ ವರದಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಸಭೆಯಲ್ಲಿಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿದ ಪ್ರಕರಣ ಉಲ್ಲೇಖಿಸಿ ಅಧಿಕಾರಿಗಳನ್ನು ಅದರಲ್ಲೂ ಗುಪ್ತಚರ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.

‘ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದೇಕೆ? ಘಟನೆ ಬಗ್ಗೆ ಸರಕಾರಕ್ಕೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ನೀಡಲಿಲ್ಲ. ಇದರಿಂದಾಗಿ 11 ಮಂದಿ ಮೃತಪಟ್ಟರು’ ಎಂದು ತೀವ್ರ ವಿಷಾಧ ವ್ಯಕ್ತಪಡಿಸಿದರು.

‘ಕಾಲ್ತುಳಿತ ಘಟನೆ ನಡೆದ ದಿನ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಇಂಟಲಿಜೆನ್ಸ್‌ ಪೊಲೀಸರು ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪು ಅಲ್ಲವೇ.? ಸಂಜೆ 5.45ಕ್ಕೆ ನಾನೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದ್ದರು. ಆದರೆ ಆ ವೇಳೆಗಾಗಲೇ  11 ಮಂದಿ ಸಾವು ಸಂಭವಿಸಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಿತ್ತರವಾಗುತ್ತಿತ್ತು.  ಸರಕಾರದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಸ್ಥನಾಗಿ ನನಗೆ ಈ ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ. ಇದು ಗುಪ್ತಚರ ಇಲಾಖೆ ಫೆಲ್ಯೂರ್‌ ಅಲ್ಲವೆ..? ಎಂದು ತಾಕೀತು ಮಾಡಿದರು.

ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ವಿಜಯೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು. ಆದರೆ ಅವರ್ಯಾರು ನನಗೆ ಸರಿ ಮಾಹಿತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಅಮಾನತು ಮಾಡಿದ್ದರಲ್ಲಿ ನನಗೂ ಬೇಸರ ಇದೆ. ಆದರೆ, ತಪ್ಪಾಗಿದ್ದು ನಿಜ ತಾನೇ’ ಎಂದು ಪ್ರಶ್ನಿಸಿದರು. ಬೆಂಗಳೂರು ನಗರ ಆಯುಕ್ತರಾಗಿದ್ದ ಐಪಿಎಸ್‌ ಅಧಿಕಾರಿ ದಯಾನಂದ್‌ ಅವರ ಹೆಸರು ಉಲ್ಲೇಖಿಸದೆ ಸಿಎಂ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಿದರು.

ತಲೆತಂಡವಾಗಿತ್ತು:

ಗುಪ್ತಚರ ಇಲಾಖೆ ವೈಫಲ್ಯವೇ ದುರ್ಘಟನೆಗೆ ಕಾರಣ ಎಂಬ ವಾಸ್ತವ ಅರಿತ ಕೂಡಲೇ ಸಿಎಂ ಸಿದ್ದರಾಮಯ್ಯ ಕ್ರಮಕ್ಕೆ ಮುಂದಾದರು. ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ಹೇಮಂತ್‌  ನಿಂಬಾಳ್ಕರ್‌ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದರು.

key words: RCB stampede, CM, Siddaramaiah, lashes out, Intelligence Department

vtu

SUMMARY:

RCB stampede incident: CM lashes out again against Intelligence Department

The incident that took place during the RCB team’s celebration has deeply hurt Chief Minister Siddaramaiah. It has been reported that he has once again expressed his anger over the dereliction of duty of the officials who led to the incident.