ಹಾಸನ ಜೂನ್,28,2025 (www.justkannada.in): ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಮುಂದುವರೆಯುತ್ತಿದ್ದು ಇದೀಗ ಆಟೋ ಚಾಲಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ಸಿದ್ದೇಶ್ವರ್ ನಗರ ನಿವಾಸಿ ಗೋವಿಂದ(37) ಮೃತಪಟ್ಟ ಆಟೋಚಾಲಕ. ಗೋವಿಂದ ಅವರು ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಟೋ ಚಲಾಯಿಸುವಾಗಲೇ ಎದೆನೋವು ಶುರುವಾಗಿದೆ. ಈ ವೇಳೆ ಗೋವಿಂದ ಆಟೋದಲ್ಲೇ ಹಾಸನ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಮೂಲಕ ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
Key words: Another, victim ,heart attack , Hassan district