ಮೈಸೂರು,ಜೂನ್,23,2025 (www.justkannada.in): ಇಂದು ನಡೆಯಬೇಕಿದ್ದ ಅರ್ಜುನ ಆನೆ ಸ್ಮಾರಕ ಉದ್ಘಾಟನೆಗೆ ವಿಘ್ನ ಎದುರಾಗಿದ್ದು, ಸ್ಥಳೀಯ ಶಾಸಕರಿಂದ ಅಸಹಕಾರ ಹಿನ್ನೆಲೆಯಲ್ಲಿ ಅರ್ಜುನ ಆನೆ ಸ್ಮಾರಕ ಅನಾವರಣ ಕಾರ್ಯಕ್ರಮವನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ದಿಢೀರ್ ಮುಂದೂಡಿಕೆ ಮಾಡಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆಯಲ್ಲಿ ಅರ್ಜುನ ಸ್ಮಾರಕ ಉದ್ಘಾಟಿಸಬೇಕಿತ್ತು. ಸ್ಮಾರಕ ಉದ್ಘಾಟಿಸಲು ಬರಬೇಕಿದ್ದ ಸಚಿವರಿಗೆ ಹೆಚ್.ಡಿ.ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಂದ ಅಸಹಕಾರ ವ್ಯಕ್ತವಾಗಿದೆ ಎನ್ನಲಾಗಿದೆ.
ಕಾರ್ಯಕ್ರಮ ಉದ್ಘಾಟನೆ ದಿನದಂದೆಯೇ ಸ್ಥಳೀಯರ ಜೊತೆ ಆನೆ- ಮಾನವ ಸಂಘರ್ಷ ಕುರಿತು ಚರ್ಚೆ, ಸಂವಾದ ನಡೆಸುವಂತೆ ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದ್ದಾರೆ. ಈ ದಿನ ಚರ್ಚೆ, ಸಂವಾದ ಬೇಡ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದು, ಆದರೆ ಸಂವಾದ ಹಾಗೂ ಉದ್ಘಾಟನೆ ಒಂದೇ ದಿನ ನಡೆಸುವಂತೆ ಶಾಸಕ ಅನಿಲ್ ಚಿಕ್ಕಮಾದು ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿಗೆ ವಾಪಸ್ ತೆರಳಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣವರೆಗೆ ಬಂದಿದ್ದ ಸಚಿವ ಈಶ್ವರ್ ಖಂಡ್ರೆ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.
Key words: inauguration, Arjuna Memorial, program, postponed