ವಸತಿ ಯೋಜನೆ ಮನೆ ಹಂಚಿಕೆಗೆ ಹಣ ಪಡೆದ ಆರೋಪ: ತನ್ನ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಶಾಸಕ

ಬೆಂಗಳೂರು,ಜೂನ್,21,2025 (www.justkannada.in): ವಸತಿ ಯೋಜನೆ ಮನೆ ಹಂಚಿಕೆಗೆ ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರ ಆಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಾಸಕ ಬಿ.ಆರ್ ಪಾಟೀಲ್ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಿ.ಆರ್ ಪಾಟೀಲ್, ನಾನು ಸತ್ಯವನ್ನೇ ಹೇಳುತ್ತೇನೆ ಅದು ನನ್ನಆಡಿಯೋ.  ನಾವು ಜನಪರ ಆಡಳಿತ ಕೊಡ್ತೀವಿ ಅಂತಾ ಹೇಳಿ ಅಧಿಕಾರಕ್ಕೆ ಬಂದಿದ್ದು. ಆದರೆ  5 ರಿಂದ 6 ಗ್ರಾಮ ಪಂಚಾಯತಿಗಳಲ್ಲಿ ದುಡ್ಡುಕೊಟ್ಟು ಮನೆಗಳನ್ನ ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಮಂಜೂರಾಗಿಲ್ಲ. ನಾನು ನಾಲ್ಕು ಪತ್ರಗಳನ್ನ ಕೊಟ್ಟಿದೆ.  ನನ್ನ ಕ್ಷೇತ್ರಕ್ಕೆ ಮನೆಗಳು  ಕೊಡಿ ಎಂದು ಮನವಿ ಕೊಟ್ಟರೂ ಮನೆಗಳು ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಕರೆದು ಮಾಹಿತಿ ಕೇಳಿದ್ರೆ ಮಾಹಿತಿ ನೀಡುತ್ತೇನೆ.  ಹೈಕಮಾಂಡ್ ಮಾಹಿತಿ ಕೇಳಿದ ವಿಚಾರ ಸಂಬಂಧ,  ನಾನು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ.  ನಾನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಶಾಸಕ ಬಿ.ಆರ್ ಪಾಟೀಲ್ ಪ್ರಶ್ನಿಸಿದರು.vtu

Key words: Congress MLA , BR Patil, money, housing scheme