ಇಂದಿರಾ ಕ್ಯಾಂಟೀನ್ ಹಣ ಅವ್ಯವಹಾರ ಆರೋಪ: ಉಪ ಆರೋಗ್ಯಾಧಿಕಾರಿ ಅಮಾನತು

ಬೆಂಗಳೂರು,ಮೇ,17,2025 (www.justkannada.in):  ಇಂದಿರಾ ಕ್ಯಾಂಟೀನ್ ನ ಕೋಟ್ಯಂತರ ರೂಪಾಯಿ ಅವ್ಯಹಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಉಪ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಡಾ.ಕಲ್ಪನಾ.ಪಿ ಅಮಾನತಾದ ಉಪ ಆರೋಗ್ಯಾಧಿಕಾರಿ. ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ ನೀಡಬೇಕಿದ್ದ 2,27,34,474 ರೂ. ಬದಲಾಗಿ ಪರಿಶೀಲನೆ ನಡೆಸದೇ 9,72,21,787 ರೂ ಗಳನ್ನು ಪಾವತಿಸಿದ ಆರೋಪ ಕೇಳಿ ಬಂದಿತ್ತು.

ಉಪ ಆರೋಗ್ಯಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ 7,00,12,396 ರೂ ಅಧಿಕ ಮೊತ್ತ ಪಾವತಿಯಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅವರನ್ನು ಅಮಾನತು ಮಾಡಿ ಬಿಬಿಎಂಪಿ ವಿಶೇಶ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Indira Canteen, money, laundering, Deputy Health Officer, suspended