ನವದೆಹಲಿ,ಮೇ,13,2025 (www.justkannada.in): ಜಮ್ಮು ಕಾಶ್ಮೀರದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಜಮ್ಮು ಕಾಶ್ಮೀರ ವಿಚಾರದಲ್ಲಿ 3ನೇ ವ್ಯಕ್ತಿ ಹಸ್ತಕ್ಷೇಪ ಮಾಡಬಾರದು. ಪಾಕಿಸ್ತಾನ ಪಿಒಕೆ ತೊರೆದರೆ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.
ಭಾರತ-ಪಾಕ್ ಕದನ ವಿರಾಮ ಘೋಷಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣಧೀರ್ ಜೈಸ್ವಾಲ್, ಜಮ್ಮು ಕಾಶ್ಮೀರದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕ್ ಕದನ ವಿರಾಮ ಉಲ್ಲಂಘಿಸಿದರೇ ಭಾರತದಿಂದ ತಕ್ಕ ಉತ್ತರ ನೀಡಲಾಗುತ್ತದೆ. ಪ್ರಸ್ತುತ ವಿಷಯ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚರ್ಚೆಯಾಗಿದೆ. ಪಾಕ್ ಡಿಜಿಎಂಒ ಮೇ10ರಂದು 2ನೇ ಬಾರಿ ಕರೆ ಮಾಡಿದ್ರು . ಪಾಕ್ ಗೆ ನಾವು ಸ್ಪಷ್ಟ ಸಂದೇಶವನ್ನ ನೀಡಿದ್ದೇವೆ ಎಂದರು.
ಸಿಂಧೂನದಿ ನೀರು ಬಿಡುವ ವಿಚಾರ ಸಸ್ಪಂಡ್ ನಲ್ಲಿ ಇಟ್ಟಿದ್ದೇವೆ. ಭಾರತ ಅಮೆರಿಕ ಅಪರೇಷನ್ ಸಿಂಧೂರ ಬಗ್ಗೆ ಚರ್ಚಿಸಿವೆ. ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಜಮ್ಮು ಕಾಶ್ಮೀರ ವಿಚಾರದಲ್ಲಿ ಬೇರೆ ದೇಶಗಳು ತಲೆಹಾಕುವಂತಿಲ್ಲ. ಪಾಕ್ ಪಿಒಕೆ ತೊರೆದರೆ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು. ಎಲ್ಲಾ ಸಮಸ್ಯೆಗಳನ್ನ ದ್ವಿಪಕ್ಷೀಯವಾಗಿ ಪರಿಹರಿಸಲಾಗುವುದು ಎಂದು ರಣಧೀರ್ ಜೈಸ್ವಾಲ್ ತಿಳಿಸಿದರು.
Key words: Ceasefire, India, Foreign Department, spokesman, Randhir Jaiswal