Tuesday, August 4, 2026

BDA Apartments

Home Crime ಕುಂಭಮೇಳದ ಕಾಲ್ತುಳಿತಕ್ಕೆ ಕರ್ನಾಟಕದ ಇಬ್ಬರು ಬಲಿ

ಕುಂಭಮೇಳದ ಕಾಲ್ತುಳಿತಕ್ಕೆ ಕರ್ನಾಟಕದ ಇಬ್ಬರು ಬಲಿ

ಪ್ರಯಾಗ್‌ ರಾಜ್‌,ಜನವರಿ,29,2025 (www.justkannada.in): ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಇಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾಠ್‌(25) ಮೃತಪಟ್ಟವರು. ಕಾಲ್ತುಳಿತದ ಬಳಿಕ ಇಬ್ಬರು ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಆದರೆ ಇದೀಗ ತಾಯಿ ಮಗಳು ಇಬ್ಬರು ಕಾಲ್ತುಳಿತದಿಂದ ಬಲಿಯಾಗಿದ್ದಾರೆ ಎನ್ನಲಾಗಿದೆ.

ಸಾವಿನ ಬಗ್ಗೆ ಜ್ಯೋತಿ ಅವರ ಪತಿ ದೀಪಕ್ ಖಚಿತಪಡಿಸಿದ್ದಾರೆ. ಪ್ರಯಾಗ್ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಪಾಲ್ಕೊಳ್ಳಲೆಂದು ಕರ್ನಾಟದ ಬೆಳಗಾವಿಯಿಂದ ಸುಮಾರು 60 ಜನರ ತಂಡ ಎರಡು ಬಸ್‌ ಗಳಲ್ಲಿ ತೆರಳಿದ್ದರು.

Key words: KumbhMela, stampede, mothers, daughter, death