Saturday, September 19, 2026

BDA Apartments

Home Front Page ರಾಜೀನಾಮೆ ನೀಡುವಂತೆ ಕಾರ್ಯಕರ್ತರ ಬಿಗಿಪಟ್ಟು: ಬೆಂಗಳೂರಿಗೆ ತೆರಳಿದ ಶಾಸಕ ತನ್ವೀರ್ ಸೇಠ್

ರಾಜೀನಾಮೆ ನೀಡುವಂತೆ ಕಾರ್ಯಕರ್ತರ ಬಿಗಿಪಟ್ಟು: ಬೆಂಗಳೂರಿಗೆ ತೆರಳಿದ ಶಾಸಕ ತನ್ವೀರ್ ಸೇಠ್

ಮೈಸೂರು,ಆಗಸ್ಟ್,4,2026 (www.justkannada.in): ನಿನ್ನೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಆದರೆ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ.

ಶಾಸಕ ಸ್ಥಾನ, ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಇಂದೇ ರಾಜೀನಾಮೆ ನೀಡಿ ಎಂದು ಶಾಸಕ ತನ್ವೀರ್ ಸೇಠ್ ಅವರಿಗೆ ಕಾರ್ಯಕರ್ತರು ಆಗ್ರಹಿಸಿದ್ದು ಕಾರ್ಯಕರ್ತರ ಮನವೊಲಿಕೆ ಸಾಧ್ಯವಾಗದೆ  ಶಾಸಕ ತನ್ವೀರ್ ಸೇಠ್ ಬೆಂಗಳೂರಿಗೆ ತೆರಳಿದ್ದಾರೆ.

ತನ್ವೀರ್ ಸೇಠ್ ಅಭಿಮಾನಿಗಳು ರಾಜೀನಾಮೆಗೆ ಸಿದ್ಧತೆ

ತನ್ವೀರ್ ಸೇಠ್ ಅವರಿಗೆ ಸಚಿವ  ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜೀನಾಮೆಗೆ ಸಿದ್ಧತೆ ನಡೆಸಿದ್ದು ನೂರಾರು ಅಭಿಮಾನಿಗಳು ಬೆಂಗಳೂರಿಗೆ ತೆರಳಿದ್ದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್  ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ರಾಜೀನಾಮೆ ನೀಡಲು  ಮುಂದಾಗಿದ್ದಾರೆ ಎನ್ನಲಾಗಿದೆ.ರಾಜೀನಾಮೆ ನೀಡುವಂತೆ ಕಾರ್ಯಕರ್ತರ ಬಿಗಿಪಟ್ಟು tanveer sait.jpg1

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶೌಕತ್, ಪಂಡು, ಬಷೀರ್, ಶ್ರೀಧರ್, ಪ್ರದೀಪ್ ಚಂದ್ರ, ಬ್ಲಾಕ್ ಪ್ರೆಸಿಡೆಂಟ್ ಸದಸ್ಯರಾದ ಸಯ್ಯದ್ ಇಕ್ಬಾಲ್, ಮಂಜುನಾಥ್, ಎಂಡಿಸಿಸಿ ಮಂಜುನಾಥ್, ಅಪ್ತಾಬ್, ಅಕ್ಮಲ್ ಸೇರಿ ಕಾಂಗ್ರೆಸ್ ಕಾರ್ಯಕರ್ತರ ರಾಜೀನಾಮೆ ನೀಡಲು ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.ಬೆಂಗಳೂರಿಗೆ ತೆರಳಿದ ಶಾಸಕ ತನ್ವೀರ್ ಸೇಠ್ jk02_new jk02 new

Key words: Activists, pressure, resign, MLA, Tanveer Sait, Bengaluru