Saturday, August 1, 2026

BDA Apartments

Home Front Page ನೆರೆ ಪರಿಹಾರ: ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ: ಶೀಘ್ರವೇ ಬಿಡುಗಡೆ- ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ…

ನೆರೆ ಪರಿಹಾರ: ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ: ಶೀಘ್ರವೇ ಬಿಡುಗಡೆ- ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ…

ಮೈಸೂರು,ಅ,2,2019(www.justkannada.in): ನೆರೆ ಪರಿಹಾರದ ಬಗ್ಗೆ ಯಾರೂ ಗೊಂದಲ ಸೃಷ್ಠಿಸುವ ಅಗತ್ಯವಿಲ್ಲ. ಇನ್ನೆರೆಡು ಮೂರು ದಿನಗಳಲ್ಲಿ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್  ಯಡಿಯೂರಪ್ಪ, ಪ್ರವಾಹ ಪರಿಹಾರಕ್ಕೆ ಯಾರೂ ಶಿಫಾರಸ್ಸು ಮಾಡುವ ಅಗತ್ಯವಿಲ್ಲ.  ಯಾರೂ ಈ ಬಗ್ಗೆ ಗೊಂದಲ ಉಂಟು ಮಾಡಬಾರದು.  ಇನ್ನು ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆ ಮಾಡಿಲ್ಲ. ಈಗಷ್ಟೇ ಪ್ರಧಾನಿ ಮೋದಿ ವಾಪಸ್ ಬಂದಿದ್ದಾರೆ. ಶೀಘ್ರವೇ ಪರಿಹಾರ ಬಿಡುಗಡೆ ಮಾಡುತ್ತಾರೆ ಎಂದರು.

ಪ್ರಧಾನಿ ಮೋದಿಗೆ ಎಲ್ಲಾ ರಾಜ್ಯಗಳ ಪರಿಸ್ಥಿತಿ ತಿಳಿದಿದೆ. ನಮ್ಮ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಗೃಹ ಸಚಿವ ಅಮಿತ್ ಶಾಗೂ ಮನವರಿಕೆ ಮಾಡಿದ್ದೇನೆ.  ಇನ್ನ ಎರಡು ಮೂರು ದಿನಗಳಲ್ಲಿ ಪರಿಹಾರ ಬಿಡುಗಡೆ ಮಾಡುವ ಭರವಸೆ ಇದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words: flood relief-  not confusion-  Released – two to three –days-CM BS Yeddyurappa -mysore