Wednesday, August 12, 2026

BDA Apartments

Home Front Page ವಿಜಯದಶಮಿ ಸಾಲು ಸಾಲು ರಜೆ ಹಿನ್ನೆಲೆ:  ಕೆಎಸ್ ಆರ್ ಟಿಸಿಯಿಂದ 2 ಸಾವಿರ ಹೆಚ್ಚುವರಿ ಬಸ್...

ವಿಜಯದಶಮಿ ಸಾಲು ಸಾಲು ರಜೆ ಹಿನ್ನೆಲೆ:  ಕೆಎಸ್ ಆರ್ ಟಿಸಿಯಿಂದ 2 ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅಕ್ಟೋಬರ್,10,2024 (www.justkannada.in): ನಾಡಹಬ್ಬ ದಸರಾ, ಆಯುಧ ಪೂಜೆ ವಿಜಯದಶಮಿ ಸಾಲು ಸಾಲು ರಜೆ ಇರುವ  ಹಿನ್ನೆಲೆಯಲ್ಲಿ ನಗರದಿಂದ ತಮ್ಮ ತಮ್ಮ ಊರಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ.

ವಿಜಯದಶಮಿಯಂದು ಊರಿಗೆ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2,000 ಹೆಚ್ಚುವರಿ ಯಾಗಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು,  ಅಂತ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್ ಗಳು ಸಂಚಾರ ಮಾಡಲಿವೆ. ಇಂದಿನಿಂದ ಶನಿವಾರದವರೆಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್‌ಆರ್ಟಿಸಿ ಬಸ್ ಹೊರಡಲಿವೆ. ಜಿಲ್ಲಾ ಕೇಂದ್ರಗಳು ಅಂತರ್ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬಸ್ ಬರಲಿವೆ.

Key words: Vijayadashami, Holiday, 2000 extra buses, KSRTC