Saturday, September 12, 2026

BDA Apartments

ಸುಪ್ರೀಂ ಆದೇಶದ ವಿರುದ್ದ ಮಂಡ್ಯದಲ್ಲಿ ಆಕ್ರೋಶ : ರೈತರ ಹೋರಾಟಕ್ಕೆ ನಿರ್ಮಲಾನ...
Home Front Page ಸುಪ್ರೀಂ ಆದೇಶದ ವಿರುದ್ದ ಮಂಡ್ಯದಲ್ಲಿ ಆಕ್ರೋಶ : ರೈತರ ಹೋರಾಟಕ್ಕೆ ನಿರ್ಮಲಾನಂದನಾಥ ಶ್ರೀಗಳು ಸಾಥ್.

ಸುಪ್ರೀಂ ಆದೇಶದ ವಿರುದ್ದ ಮಂಡ್ಯದಲ್ಲಿ ಆಕ್ರೋಶ : ರೈತರ ಹೋರಾಟಕ್ಕೆ ನಿರ್ಮಲಾನಂದನಾಥ ಶ್ರೀಗಳು ಸಾಥ್.

ಮಂಡ್ಯ,ಸೆಪ್ಟಂಬರ್,22,2023(www.justkannada.in): ಕೆಆರ್ ಎಸ್ ಜಲಾಶಯದಲ್ಲಿ ನೀರಿಲ್ಲದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುವಂತೆ  ಸುಪ್ರೀಂಕೋರ್ಟ್ ಆದೇಶಿಸಿರುವುದನ್ನ ಖಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ರೈತರ ಹೋರಾಟಕ್ಕೆ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಶ್ರೀಗಳು ಸಾಥ್ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸುತ್ತಿದ್ದು ನಿರ್ಮಲಾನಂದನಾಥ ಶ್ರೀಗಳು ಹೋರಾಟದಲ್ಲಿ ಪಾಲ್ಗೊಂಡು ಸಾಥ್ ನೀಡಿದ್ದಾರೆ.ಸುಪ್ರೀಂ ಆದೇಶದ ವಿರುದ್ದ ಮಂಡ್ಯದಲ್ಲಿ ಆಕ್ರೋಶ nirmalanandanath-shri nirmalanandanath shri

ಈ ವೇಳೆ ಮಾತನಾಡಿದ ನಿರ್ಮಲಾನಂದನಾಥ ಶ್ರೀಗಳು, ಪ್ರಜೆಗಳ ಹಿತವನ್ನು ಕಾಪಾಡುವ ಕೆಲಸ ಯಾವುದೇ ಸರ್ಕಾರ ಮಾಡಲಿ.  ಮನುಷ್ಯನಅಸ್ತಿತ್ವ  ಪ್ರಶ್ನೆ ಮಾಡುವ ಕಾಲ ಬಂದಿದೆ. ಕಷ್ಟ ಮತ್ತಷ್ಟು ಉಲ್ಬಣವಾಗಬಾರದೆಂದು ಹೋರಾಟ ಮಾಡಲಾಗುತ್ತಿದೆ. ತಮಿಳುನಾಡಿಗೆ ನೀರು ಬಿಡುವುದರಿಂದ ರೈತರಿಗೆ ಕಷ್ಟವಾಗಲಿದೆ. ಮುಂದೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ.  ಹೀಗಾಗಿ ಸುಪ್ರೀಂಕೋರ್ಟ್ ಆದೇಶವನ್ನ ಸರ್ಕಾರ ಪ್ರಶ್ನೆ ಮಾಡಬೇಕು. ಸುಪ್ರೀಂಕೋರ್ಟ್ ನಲ್ಲಿ ಸರ್ಕಾರ ಕಾನೂನು ಹೋರಾಟ ಮುಂದುವರೆಸಲಿ ಎಂದು ಸಲಹೆ ನೀಡಿದ್ದಾರೆ

Key words: cavery dispute – mandya-protest-Nirmalanandanatha Shri –support