Saturday, August 8, 2026

BDA Apartments

Home Front Page ನಾಳೆ ಮತದಾನಕ್ಕೆ ಮಳೆಯ ಆತಂಕ: ನಾಲ್ಕು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್.

ನಾಳೆ ಮತದಾನಕ್ಕೆ ಮಳೆಯ ಆತಂಕ: ನಾಲ್ಕು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್.

ಬೆಂಗಳೂರು,ಮೇ,9,2023(www.justkannada.in):  ನಾಳೆ ರಾಜ್ಯ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಆದರೆ ನಾಳೆ ಮತದಾನಕ್ಕೆ ಮಳೆಯ ಅಡ್ಡಿ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಮುಂದಿನ 5ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮತದಾನಕ್ಕೆ ಮಳೆಯ ಆತಂಕ ಎದುರಾಗಿದೆ. ಈ ನಡುವೆ ಕೊಡಗು, ಹಾಸನ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ.  ಉತ್ತರ ಒಳನಾಡಿನಲ್ಲಿ ಇಂದು ನಾಳೇ  ಭಾರಿ ಮಳೆಯಾಗಲಿದೆ ಎನ್ನಲಾಗಿದೆ.

ಇಂದು  ಕಲ್ಬುರ್ಗಿ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಬೃಹತ್ ಮರವೊಂದು ಧರೆಗುರುಳಿದೆ.  ಸರ್ಕಾರಿ ಶಾಲೆಯ  ಆವರಣದಲ್ಲಿ ಬೃಹತ್ ಮರ ಬಿದ್ದಿದೆ.  ಕೋಟನೂರು ಡಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಶಾಲೆಯಲ್ಲಿ  ಸಿಬ್ಬಂದಿಗಳು ಮತದಾನಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಈ ವೇಳೆ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಮರ ಧರೆಗುರುಳಿದೆ.

Key words: rain – voting –tomorrow-Yellow alert – four districts.