Sunday, September 20, 2026

BDA Apartments

ಮೊಮ್ಮಗನ ಜೊತೆ ಸಿದ್ಧರಾಮಯ್ಯ ಪ್ರಚಾರ: ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸ...
Home Front Page ಮೊಮ್ಮಗನ ಜೊತೆ ಸಿದ್ಧರಾಮಯ್ಯ ಪ್ರಚಾರ: ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸಾಕ್ಷಿ ಬೇಡ- ಸಂಸದ ಪ್ರತಾಪ್...

ಮೊಮ್ಮಗನ ಜೊತೆ ಸಿದ್ಧರಾಮಯ್ಯ ಪ್ರಚಾರ: ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸಾಕ್ಷಿ ಬೇಡ- ಸಂಸದ ಪ್ರತಾಪ್ ಸಿಂಹ..

ಮೈಸೂರು,ಏಪ್ರಿಲ್,20,2023(www.justkannada.in):  ವರುಣಾ ಕ್ಷೇತ್ರದಲ್ಲಿ ಒಂದು ಲಕ್ಷಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಸಿದ್ದರಾಮಯ್ಯ ಗೆ ಪುಕ್ಕಲತನ ಭಯ ಕಾಡುತ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯರನ್ನ ನೋಡಿದ್ರೆ ನಗು ಬರುತ್ತೆ. ಒಂದು ಲಕ್ಷ ಮತದಲ್ಲಿ ಗೆಲ್ಲುವ ವಿಶ್ವಾಸ ಇರೋ ಸಿದ್ದರಾಮಯ್ಯ 18 ವರ್ಷದ ಮೊಮ್ಮಗ, ಕುಟುಂಬದವರನ್ನ ಕರೆದುಕೊಂಡು ಪೂಜೆ ಪುನಸ್ಕಾರ ಮಾಡಿ ಸೆಂಟಿಮೆಂಟಲ್ ಆಗಿ ಮತ ಕೇಳ್ತಾ ಇದ್ದರೆ. ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಎಂದು ಲೇವಡಿ ಮಾಡಿದರು.ಮೊಮ್ಮಗನ ಜೊತೆ ಸಿದ್ಧರಾಮಯ್ಯ ಪ್ರಚಾರ prathap simha

ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮೊಮ್ಮಗನನ್ನ ಉತ್ತರಾಧಿಕಾರಿ ಅಂತ ಸಂದೇಶ ನೀಡ್ತಾ ಇದ್ದೀರಾ. ಕಾಂಗ್ರೆಸ್ ಗೆ ಹೋದ ಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ದಾಂತ ಸತ್ತೊಯ್ತಾ…? ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು ಹಾಗಿದ್ರೆ. ಕಾಂಗ್ರೆಸ್ ಗೆ ಹೋದ ಬಳಿಕ ನಿಮ್ಮ ಸಿದ್ದಾಂತ, ನೈತಿಕತೆಯನ್ನ ಕಾಂಗ್ರೆಸ್ ಗೆ ಅಡವಿಟ್ಟರಾ…? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ಮೊಮ್ಮಗನನ್ನ ಕರೆದುಕೊಂಡು ಹೋಗಿ ಮತ ಕೇಳೋದನ್ನ ನೋಡಿದ್ರೆ ನಿಶ್ಚಿತ. ನೀವು ಸಿಎಂ ಆದಾಗಲೇ ಒಂದು ಲಕ್ಷ ಮತದಲ್ಲಿ ವರುಣಾದಲ್ಲಿ ಗೆಲ್ಲೋಕೆ ಆಗಲಿಲ್ಲ. ಆಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ರಿ. ನಾವು ಪ್ರಬಲ ಅಭ್ಯರ್ಥಿ ಹಾಕುತ್ತಿದ್ದಾಗೇ ಮೊಮ್ಮಗ, ಕುಟುಂಬ ಹಾದಿಯಾಗಿ ಪ್ರಚಾರಕ್ಕೆ ಇಳಿಯುತ್ತಿದ್ದಿರಿ. ಕರ್ನಾಟಕ ಇತಿಹಾಸದಲ್ಲಿ ಯಾರಾದ್ರು ಒಂದು ಲಕ್ಷ ಮತದಲ್ಲಿ ಗೆದ್ದಿದ್ದರೆ ಹೇಳಿ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ 36 ಸಾವಿರ ಅಂತರದಿಂದ ಸೋತಿದ್ದೀರಿ. ಮೇ 13 ಕ್ಕೆ ಚಾಮುಂಡೇಶ್ವರಿ ತಾಯಿ ತೀರ್ಪು ಕೊಡ್ತಾಳೆ‌. ಅಲ್ಲಿ ತನಕ ಆದರೂ ಬಡಾಯಿಕೊಚ್ಚಿಕೊಳ್ಳದೇ ಇರಿ ಎಂದು ಹೇಳಿದರು.

Key words: Siddaramaiah -campaigning –with- his grandson- criticize-MP Pratap Simha