Saturday, August 22, 2026

BDA Apartments

Home Front Page ಕೋಲಾರ ಟಿಕೆಟ್ ಘೋಷಣೆಯಲ್ಲಿ ಗೊಂದಲವಿಲ್ಲ- ಡಿ.ಕೆ ಶಿವಕುಮಾರ್

ಕೋಲಾರ ಟಿಕೆಟ್ ಘೋಷಣೆಯಲ್ಲಿ ಗೊಂದಲವಿಲ್ಲ- ಡಿ.ಕೆ ಶಿವಕುಮಾರ್

ಬೆಂಗಳೂರು,ಏಪ್ರಿಲ್,15,2023(www.justkannada.in):  ರಾಜ್ಯ ವಿಧಾನಸಭಾ  ಚುನಾವಣೆ ಹಿನ್ನೆಲೆ, ಇಂದು ಕಾಂಗ್ರೆಸ್ 43 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ್ದು ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಿಕೆಟ್ ಕೈತಪ್ಪಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಲಾರ ಕ್ಷೇತ್ರದ ಟಿಕೆಟ್ ಘೋಷಣೆಯಲ್ಲಿ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳು  ಹೆಚ್ಚಿದ್ದರಿಂದ ಪಟ್ಟಿ ತಡವಾಯಿತು ಎಲ್ಲರಿಗೂ ಅಧಿಕಾರ ಹಂಚಲು ಸಾಧ್ಯವಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಳೇ ಕೋಲಾರದಲ್ಲಿ ಜೈ ಭಾರತ್ ಸಮಾವೇಶ ನಡೆಯಲಿದೆ. ರಾಹುಲ್ ಗಾಂಧಿ ಸಮಾವೇಶಕ್ಕೆ ಬರಲಿದ್ದಾರೆ. ರಾಹುಲ್ ಗಾಂಧಿ ಮಾತನ್ನ ಎಲ್ಲಿ ಅಡಗಿಸಲು ಪ್ರಯತ್ನಿಸಿದರೂ ಅಲ್ಲಿಂದಲೇ ಹೋರಾಟ ಪ್ರಾರಂಭಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು,

Key words: no confusion – Kolar ticket -announcement – DK Shivakumar